ಸ್ವಾಮಿ ವಿವೇಕಾನಂದ-ಹೊಸ ಶೋಧ

Author : ಚಂದ್ರಕಾಂತ ಪೋಕಳೆ

Pages 125

₹ 125.00




Published by: ಸ್ವಾಮಿ ವಿವೇಕಾನಂದ-ಹೊಸ ಶೋಧ

Synopsys

ಸ್ವಾಮಿ ವಿವೇಕಾನಂದರು ನಿಜವಾಗಿ ಯಾರು? ಒಬ್ಬ ಧರ್ಮಗುರುವೇ, ಒಬ್ಬ ಧಾರ್ಮಿಕ ಪುರುಷನೇ, ಒಬ್ಬ ಪ್ರವಚನಕಾರನೇ, ಪರಿವಾರದ ಚೌಕಟ್ಟಿನಲ್ಲಿರುವ ಒಬ್ಬ ದಕ್ಷ ಹಿಂದುವೇ? ಅಥವಾ ಪರಿವರ್ತನೆಯ ಚಳುವಳಿಯ ಅಗ್ರದೂತರಾಗಿದ್ದರೆ? ಇಲ್ಲವೇ ದೇಶದ ಮೊದಲ ಸಾಮ್ಯವಾದಿಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕೃತಿಯಲ್ಲಿದೆ.  ವಿವೇಕಾನಂದ ಕುರಿತಂತೆ ನಮಗೆ ಹೆಚ್ಚಾಗಿ ಕಾಣಿಸದ ಅವರ ಪಾರ್ಶ್ವ ವ್ಯಕ್ತಿತ್ವವೊಂದು ಈ ಕೃತಿಯಲ್ಲಿ ಅನಾವರಣಗೊಂಡಿದೆ. ಚಂದ್ರಕಾಂತ ಪೋಕಳೆ ಅವರು ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ವಿವೇಕಾನಂದರ ಅಸಂಖ್ಯಾತ ಪತ್ರ, ಟಿಪ್ಪಣಿ, ಗ್ರಂಥ, ಸ್ವತಃ ವಿವೇಕಾನಂದರೇ ಬರೆದ ಲೇಖನ, ಮಾಡಿದ ಭಾಷಣ ಪ್ರತಿಕ್ರಿಯೆ ಹೀಗೆ ಎಲ್ಲ ದಾಖಲೆಗಳನ್ನು ಎದುರಿಸಿ ನಡೆಸಿದ ಚರ್ಚೆಗಳ ಬಗ್ಗೆ ವಿವರಗಳನ್ನು  ಈ ಕೃತಿಯಲ್ಲಿ ನೀಡಲಾಗಿದೆ. ವಿವೇಕಾನಂದರನ್ನು ಅರ್ಥ ಮಾಡಿಕೊಳ್ಳುವ ಮೂಲಕ ಹುಸಿ ಹಿಂದುತ್ವವನ್ನು ಹೇಗೆ ಎದುರಿಸಬಹುದು ಎನ್ನುವುದಕ್ಕೆ ಕೃತಿ ನಮಗೆ ತಿಳಿಸುತ್ತದೆ. ವಿವೇಕಾನಂದರ ಅತಿ ವೈಭವೀಕರಣ, ಹಾಗೆಯೇ ಕೇಸರೀಕರಣ, ಇನ್ನೊಂದು ವಿವೇಕಾನಂದರ ಸಾಮಾನೀಕರಣ. ಅವರು ಹೇಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದರು ಎನ್ನುವುದನ್ನು ಹೇಳುವ ಬರಹಗಳನ್ನು ಈ ಕೃತಿಯೂ ಒಳಗೊಂಡಿವೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books