ರಾಘವಾಂಕ ಮಹಾಕವಿಯ ವಚನ ಹರಿಶ್ಚಂದ್ರ ಚಾರಿತ್ಯ್ರ

Author : ಜಿ. ಕೃಷ್ಣಪ್ಪ

Pages 144

₹ 108.00




Year of Publication: 2016
Published by: ವಂಶಿ ಪಬ್ಲಿಕೇಷನ್ಸ್
Address: ಸಂಖ್ಯೆ 4, ಬಿಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ ಬ:ಳಿ, ನೆಲಮಂಗಲ, ಬೆಂಗಳೂರು-562123

Synopsys

ಸಾಹಿತಿ ಡಾ. ಜಿ. ಕೃಷ್ಣಪ್ಪ ಅವರು ರಚಿಸಿದ ಕೃತಿ-ರಾಘವಾಂಕ ಮಹಾಕವಿಯ ವಚನ ಹರಿಶ್ಚಂದ್ರ ಚಾರಿತ್ಯ್ರ. ಹರಿಶ್ಚಂದ್ರ ಕಾವ್ಯವು ರಾಘವಾಂಕ ಕವಿಯನ್ನು ಕನ್ನಡ ಪ್ರಾಚೀನ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ನೀಡಿದೆ. ಸತ್ಯ ಪ್ರತಿಪಾದನೆಗಾಗಿ ಹರಿಶ್ಚಂದ್ರನ ಜೀವನ ಬದ್ಧತೆ, ಆ ಮೂಲಕ ದೇವರನ್ನು ಒಲಿಸಿಕೊಳ್ಳುವ ಪರಿ-ಎಲ್ಲವೂ ಕೇವಲ ಕಥೆಯಾಗಿ ಮಾತ್ರವಲ್ಲ; ಕಾವ್ಯ ಶೈಲಿಯ ದೃಷ್ಟಿಯಿಂದಲೂ, ಜೀವನ ಸಂದೇಶದ ದೃಷ್ಟಿಯಿಂದಲೂ ಓದುಗರ ಮನಸೂರೆಗೊಳ್ಳುತ್ತದೆ. ಹಳೆಗನ್ನಡದ ಈ ಸಾಹಿತ್ಯವನ್ನು ಕನ್ನಡದಲ್ಲಿ ತುಂಬಾ ಸರಳವಾಗಿ ಬರೆದ ಕೃತಿ ಇದು.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books