ಪಂಪ ಭಾರತ ಪ್ರಸಂಗ

Author : ಸಿ.ಪಿ. ನಾಗರಾಜ

Pages 496

₹ 550.00




Year of Publication: 2023
Published by: ನಾಗು ಸ್ಮಾರಕ ಪ್ರಕಾಶನ
Address: ಆರ್.ವಿ.ಕಾಲೇಜು ಪೋಸ್ಟ್, ಬೆಂಗಳೂರು.
Phone: 9986347521

Synopsys

‘ಪಂಪ ಭಾರತ ಪ್ರಸಂಗ’ ಸಿ.ಪಿ ನಾಗರಾಜ ಅವರ ಕೃತಿಯಾಗಿದೆ. ಪಂಪ ಕವಿಯ ವಿಕ್ರಮಾರ್ಜುನ ವಿಜಯ ಎಂಬ ಕೃತಿಯಲ್ಲಿ ಬರುವ ಕೆಲವು ಪ್ರಸಂಗಗಳನ್ನು ಸಿ.ಪಿ.ನಾಗರಾಜ ಅವರು ಆಯ್ದುಕೊಂಡು, ಓದುಗರು ಓದಲು ನೆರವಾಗುವಂತೆ ಬರೆದಿದ್ದಾರೆ. ಇವೆಲ್ಲ ಪ್ರಸಂಗಗಳು ಕೃತಿಯ ಪಾತ್ರಗಳ ನಡುವೆ ನಡೆಯುವ ಮಾತುಕತೆಗಳು, ಹಾಗಾಗಿ ಒಂದು ಬಗೆಯ ನಾಟಕೀಯ ಎನಿಸುವ ನೆಲೆಯಲ್ಲಿ ಇವೆ.

ಪಂಪನ ಈ ಕೃತಿಯು ಕನ್ನಡದ ಕಥನ ಪರಂಪರೆಯ ಚಹರೆಗಳನ್ನು ರೂಪಿಸಿಕೊಟ್ಟದೆ. ಆ ಮೊದಲು ಸಂಸ್ಕೃತ ನುಡಿಯಲ್ಲಿ ಇದ್ದ ಮಹಾಕಾವ್ಯಗಳ ಕಥನ ವಿಧಾನವು ಶ್ರವ್ಯಮಾನತೆಯನ್ನು ತನ್ನ ಚಹರೆಯನ್ನಾಗಿ ಇರಿಸಿಕೊಂಡಿತ್ತು. ಅಂದರೆ ಕಥನಗಳು ಕೇಳುವಿಕೆಯನ್ನು ಅವಲಂಬಿಸಿ ರೂಪುಗೊಂಡಿದ್ದವು. ಓದುವವರು ಓದಿ ಹೇಳುವಾಗ, ಕೇಳುವವರಿಗೆ ಕಾವ್ಯಗಳು ತಲುಪುತ್ತಿದ್ದವು.

ಕನ್ನಡದಲ್ಲಿ ಕಥನ ಪರಂಪರೆಯನ್ನು ಕಟ್ಟುವಾಗ ಪಂಪ ಶ್ರವ್ಯಮಾನತೆಯೊಡನೆ ದೃಶ್ಯಮಾನತೆಯನ್ನು ಸೇರ್ಪಡೆಗೊಲಿಸಿದ್ದಾನೆ. ಅಂದರೆ ಕಿವಿಗೆ ತಲುಪುವ ಜೊತೆಗೆ, ಕಣ್ಣಿಗೆ ಕಟ್ಟುವ ಹಾಗೆಯೂ ಇರಬೇಕು ಎಂಬುದೇ ಈ ಚಹರೆಯ ನೆಲೆಯಾಗಿದೆ. ಈ ಕೃತಿಯು ಹೊಸ ತಲೆಮಾರಿನ ಓದುಗರಿಗೆ ಪಂಪನನ್ನು ಹೆಚ್ಚು ಹತ್ತಿರಕ್ಕೆ ಒಯ್ಯಲು ನೆರವಾಗುತ್ತದೆ .

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Related Books