ಜಾಗತೀಕರಣ ಮತ್ತು ಜಾನಪದ

Author : ಗವೀಶ ಹಿರೇಮಠ

Pages 92

₹ 50.00




Year of Publication: 2007
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಬೆಂಗಳೂರು

Synopsys

ಜಾಗತೀಕರಣ ಮತ್ತು ಜಾನಪದ- ಲೇಖಕ ಗವೀಶ ಹಿರೇಮಠ ಅವರು ಬರೆದ ಕೃತಿ. ಜಾಗತೀಕರಣದ ಇಂದಿನ ಕಾಲಘಟ್ಟದಲ್ಲಿ ಜಾನಪದ ಕಲೆಗಳ ಉಳಿವಿನ ಕುರಿತು ಈ ಕೃತಿಯು ಚರ್ಚಿಸುತ್ತದೆ. ‘ಜಾಗತೀಕರಣದ ಬಗ್ಗೆ, ಜಾನಪದ ಕಲೆಗಳ ಅಳಿವು-ಉಳಿವಿನ ಬಗ್ಗೆ ಇಂದು ಚಿಂತಿಸುವುದು, ಯೋಚಿಸುವುದು ಅವಶ್ಯವಿದೆ. ಜಾಗತೀಕರಣ ಇಂದು ಒಂದು ಸವಾಲಾಗಿದೆ. ನಮ್ಮ ಕಲೆಗಳು, ನಮ್ಮ ಆಚರಣೆಗಳು, ನಮ್ಮ ಗುಡಿ ಕೈಗಾರಿಕೆಗಳ ಜೊತೆಗೆ ನಮ್ಮ ಸಂಸ್ಕೃತಿ ನಮ್ಮ ಪರಂಪರೆ ಮರೆಯಾಗುತ್ತ ಹಳ್ಳಿಗಳಲ್ಲಿಯೂ ವಿದೇಶಿ ಸಂಸ್ಕೃತಿಯ ಗಾಳಿ ಬೀಸುತ್ತಿರುವುದು ಜಾಗತೀಕರಣದ ಪ್ರಭಾವವೆನ್ನದಿರಲಾಗದು’ ಎನ್ನುವ ಮಾತುಗಳು ಈ ಕೃತಿಯ ಪ್ರಾಮುಖ್ಯತೆಯನ್ನು ವಿವರಿಸುತ್ತದೆ.

About the Author

ಗವೀಶ ಹಿರೇಮಠ
(08 September 1946 - 13 August 2020)

ಲೇಖಕ ಗವೀಶ ಹಿಮಠ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಗ್ರಾಮದವರು. ಪುರಾಣ ಪ್ರವಚನಕಾರ ವೀರಭದ್ರಯ್ಯ-ಪಾರ್ವತಮ್ಮ ದಂಪತಿಯ ಪುತ್ರರು. 08.09.1946 ರಂದು ಜನನ. ಓದಿದ್ದು ಕೊಪ್ಪಳ, ಧಾರವಾಡದಲ್ಲಿ. ಗುಲ್ಬರ್ಗ ವಿ.ವಿ. ಯ ಗ್ರಂಥಾಲಯದ ಪ್ರ.ಸಹಾಯಕರಾಗಿ ನಿವೃತ್ತರಾಗಿದ್ದರು. ಕಳೆದ 50 ವರ್ಷಗಳಿಂದ ಕಲಬುರಗಿಯಲ್ಲೇ ವಾಸವಾಗಿದ್ದರು.  ಜಾಗತೀಕರಣ ಮತ್ತು ಜಾನಪದ. ಡಾ.ಬಿ.ಎಸ್. ಗದ್ದಗಿಮಠ: ಬದುಕು ಬರಹ. ರಂಗಭೂಮಿ ಜೀವ-ಜೀವಾಳ ಶ್ರೀಧರ ಹೆಗಡೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ರಂಗಕನಸುಗಳು (1989-90) ಹಾಗೂ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ರಂಗಾಂತರಂಗ  ((2003-04) ಶೀರ್ಷಿಕೆಗಳಡಿ ರಂಗಭೂಮಿ ಕುರಿತು ಅಂಕಣಗಳನ್ನು ಬರೆದು ರಂಗಕರ್ಮಿಗಳನ್ನು ಪರಿಚಯಿಸಿದರು. ಇವರ ಕಲಾವಿದರು ನಡೆದು ಬಂದ ...

READ MORE

Related Books