ಪುರಂದರ ಸಾಹಿತ್ಯ ಅಧ್ಯಯನ

Author : ಅಮರೇಶ ನುಗಡೋಣಿ

Pages 174

₹ 120.00




Year of Publication: 2010
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

’ಪುರಂದರ ಸಾಹಿತ್ಯ ಅಧ್ಯಯನ' ಎಂಬ ಈ ಸಂಪಾದನ ಕೃತಿ, ಹೊಸ ಪೀಳಿಗೆಯ ವಿಮರ್ಶಕರು ಪುರಂದರರ ಕೀರ್ತನೆಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ ಗ್ರಹಿಸಿದ್ದಾರೆ. ಈ ಕೃತಿಯಲ್ಲಿ ಹೊಸ ವಿಮರ್ಶಕರು ತಾವು ಕಂಡಂತೆ ಪುರಂದರ ದಾಸರ ಕೀರ್ತನೆಗಳ ಕುರಿತು ವಿಮರ್ಶಿಸಿದ್ದಾರೆ. ಪುರಂದರರು ಹರಿದಾಸ ಪರಂಪರೆಯಲ್ಲಿ ಸಮರ್ಥ ಪ್ರತಿನಿಧಿಯಾಗಿ ನಿಂತವರು. ಅವರ ಕೀರ್ತನೆಗಳು ಓದುಗರ ಸತ್ಯ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಇದು ಶತಮಾನಗಳ ಉದ್ದಕ್ಕೂ ನಿರಂತರವಾಗಿ ನಡೆದುಬಂದಿದೆ. ಈ ಹೊತ್ತಿನ ಸಾಂಸ್ಕೃತಿಕ ವಿದ್ಯಮಾನಗಳ ನೆಲೆಯಲ್ಲಿ ಪುರಂದರರ ಕೀರ್ತನೆಗಳನ್ನು ಅಧ್ಯಯನಕ್ಕೆ ಒಳಪಡಿಸಿದರೂ ಗೆಲ್ಲುತ್ತವೆ. ಪ್ರಭುತ್ವ, ಸಮಾಜ, ಅನುಭಾವ, ದೇಸೀಯತೆ, ಲೋಕದೃಷ್ಟಿ, ಜೀವನಪ್ರೀತಿ ಮುಂತಾದ ಪರಿಕಲ್ಪನಾತ್ಮಕ ವಸ್ತುಗಳ, ವಿಷಯಗಳ ಶೋಧಕ್ಕೆ ಪುರಂದರರ ಕೀರ್ತನೆಗಳು ಆಕರವಾಗಿ ಬಳಕೆಯಾಗಿರುವುದು ವಿಶೇಷವೇ.

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books