ಆಧುನಿಕ ಕನ್ನಡ ಮಹಾಕಾವ್ಯ

Author : ಶ್ರೀಧರ ಹೆಗಡೆ ಭದ್ರನ್‍

Pages 332

₹ 200.00




Year of Publication: 2007
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಸಂಸ್ಕೃತ, ಹಳಗನ್ನಡ, ಆಧುನಿಕ ಸಾಹಿತ್ಯ, ಸಂಗೀತ, ಯಕ್ಷಗಾನ ಹೀಗೆ ಹಲವು ವಿಷಯಗಳ ಬಗೆಗೆ ನಿಂತ ನಿಲುವಿನಲ್ಲಿ ಮಾತನಾಡಬಲ್ಲ, ಚಿಂತಿಸಬಲ್ಲ, ಬರೆಯಬಲ್ಲ ಹೊಸತಲೆಮಾರಿನ ಲೇಖಕ ಶ್ರೀಧರ ಹೆಗಡೆ ಭದ್ರನ್. ಕನ್ನಡ ಪರಂಪರೆ, ಸಂಪ್ರದಾಯದ ಅರಿವು, ಆಧುನಿಕ ವಿಚಾರ, ಚಿಂತನಕ್ರಮಗಳ ಬಗೆಗೆ ಆಸಕ್ತಿ, ಸಾಮಾಜಿಕ ಪಲ್ಲಟಗಳನ್ನು, ಧಾರ್ಮಿಕ ಪ್ರಕ್ರಿಯೆಗಳನ್ನು ವಿವೇಕಯುತವಾಗಿ ನೋಡುವ ಜಾಣೆ, ಅಷ್ಟೆ ವಿನಯವಂತಿಕೆಯ ವ್ಯಕ್ತಿತ್ವ ಶ್ರೀಧರ್ ಅವರದು.

ಶ್ರೀಧರ ಅವರು ತಮ್ಮ ಪಿಎಚ್.ಡಿ. ಸಂಶೋಧನೆಗಾಗಿ ಸಿದ್ಧಪಡಿಸಿದ ’ಆಧುನಿಕ ಕನ್ನಡ ಮಹಾಕಾವ್ಯ’ ಮಹಾಪ್ರಬಂಧ. ಕುವೆಂಪು ಅವರ ’ಶ್ರೀರಾಮಾಯಣ ದರ್ಶನಂ’, ವಿ.ಕೃ.ಗೋಕಾಕ್ ಅವರ ’ಭಾರತ ಸಿಂಧುರಶ್ಮಿ’, ಸಂ.ಶಿ. ಭೂಸನೂರುಮಠ ಅವರ ’ಭವ್ಯಮಾನವ’ ಸೇರಿದಂತೆ 20ನೇ ಶತಮಾನದಲ್ಲಿ ರಚನೆಯಾಗಿ ಪ್ರಕಟಗೊಂಡ ಮಹಾಕಾವ್ಯಗಳನ್ನು ಶ್ರೀಧರ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಶ್ರೀಧರ ಅವರ ಓದು-ಒಳನೋಟಗಳಿಗೆ ಈ ಪುಸ್ತಕ ಸಾಕ್ಷಿಯಾಗಿದೆ. 

About the Author

ಶ್ರೀಧರ ಹೆಗಡೆ ಭದ್ರನ್‍
(01 November 1977)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...

READ MORE

Related Books