ದಾಸೋಹ ಸಿರಿ

Author : ಚನ್ನಪ್ಪ ಎರೇಸೀಮೆ

Pages 744

₹ 250.00




Year of Publication: 1997
Published by: ಹಳೆಯ ವಿದ್ಯಾರ್ಥಿ ಸಂಘ
Address: ಶ್ರೀ ಸಿದ್ಧಗಂಗಾ ಕ್ಷೇತ್ರ, ತುಮಕೂರು

Synopsys

ತುಮಕೂರಿನ ಶ್ರೀ ಸಿದ್ಧಗಂಗಾ ಕ್ಷೇತ್ರದ ಮಹಿಮೆ, ಶೈಕ್ಷಣಿಕ ಕ್ಷೇತ್ರವಾಗಿ ಪರಿವರ್ತನೆ, ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆ ಒಳಗೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ವಿಕಾಸದ ಸಂಪೂರ್ಣ ಚಿತ್ರಣ ನೀಡುವ ಕೃತಿ-ದಾಸೋಹ ಸಿರಿ. ಪಂಡಿತ ಚನ್ನಪ್ಪ ಎರೇಸೀಮೆ ಅವರು ಪ್ರಧಾನ ಸಂಪಾದಕರು. ಟಿ.ಆರ್. ಮಹಾದೇವಯ್ಯ, ಎಚ್.ವಿ.ವೀರಭದ್ರಯ್ಯ ಹಾಗೂ ಬಿ.ವೀರಭದ್ರಯ್ಯ ಸಂಪಾದಕರು.

ಸಿದ್ಧಗಂಗಾ ಕ್ಷೇತ್ರದ ನೆನಪಾದರೆ ಸಾಕು-ಅಲ್ಲಿಯ ದಾಸೋಹ ಸೇವೆ ಮೊದಲು ನೆನಪಿಗೆ ಬರುತ್ತದೆ. ಊಟ-ವಸತಿ-ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಈ ಕ್ಷೇತ್ರದ ಸೇವೆಗೆ ಕುಂದು ಎಂಬುದೇ ಇಲ್ಲ. 1930ರ ಮಾಚ್ 3 ರಿಂದ ಶಿವಕುಮಾರ ಸ್ವಾಮೀಜಿ ಅವರು ಈ ಮಠ ಮುನ್ನಡೆಸುವ ಹೊಣೆ ಹೊತ್ತುಕೊಂಡಾಗಿನ ದಯನೀಯ ಸ್ಥಿತಿ-ಗತಿಯ ವಿವರಣೆಯಿಂದ ಹಿಡಿದು ಇಂದಿನ ವಿಶ್ವವ್ಯಾಪಿಯ ವಿರಾಟ ಸ್ವರೂಪವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.

ಶಿವಕುಮಾರ ಸ್ವಾಮೀಜಿಯವರ ವಜ್ರಮಹೋತ್ಸವದ ಸಂದರ್ಭದಲ್ಲಿ ವಜ್ರಮಹೋತ್ಸವ ಸಮಿತಿ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಜಂಟಿ ಪ್ರಯತ್ನವಾಗಿ ‘ದಾಸೋಹ ಸಿರಿ’ ಪ್ರಕಟಗೊಂಡಿದೆ. ಈ ಕೃತಿಯಲ್ಲಿ ಶ್ರೀ ಕ್ಷೇತ್ರದ ಹಾಗೂ ಶ್ರೀಗಳ ಬಗ್ಗೆ ವಿವರಗಳಿವೆ. ಕ್ಷೇತ್ರ ಹಾಗೂ ಶ್ರೀಗಳ ಸೇವೆಯನ್ನು ಪ್ರಶಂಸಿಸಿ ಹಿರಿಯರಾದ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ, ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ , ಸಾಹಿತಿ ಶಿವರಾಮ ಕಾರಂತ ಸೇರಿದಂತೆ ಇತರೆ ಗಣ್ಯರ ಹಾರೈಕೆಗಳಿವೆ. ಗೋಸಲ ಪರಂಪರೆ, ಮಠ ಮತ್ತು ಸಮಾಜ, ವೀರಶೈವರ ವಿವಿಧ ಮಠಗಳ ಕೊಡುಗೆ ಹೀಗೆ ವಿವಿಧ ಅಧ್ಯಾಯಗಳಡಿ ವಿವಿಧ ಲೇಖಕ-ಚಿಂತಕರು ಬರೆದ ಲೇಖನಗಳ ಬೃಹತ್ ರಾಶಿಯೇ ಈ ಕೃತಿ ಒಳಗೊಂಡಿದೆ.

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books