ನಿರಾಳ (ಡಾ.ಎಂ.ಎಂ. ಪಡಶೆಟ್ಟಿ ಅಭಿನಂದನಾ ಗ್ರಂಥ)

Author : ಶ್ರೀರಾಮ ಇಟ್ಟಣ್ಣವರ

Pages 612

₹ 600.00




Year of Publication: 2019
Published by: ನೆಲೆ ಪ್ರಕಾಶನ ಸಂಸ್ಥೆ
Address: ಸಿಂದಗಿ, ವಿಜಯಪುರ ಜಿಲ್ಲೆ

Synopsys

ಜಾನಪದ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಮಾದರಿಯ ಕೆಲಸ ಮಾಡಿದವರು ಎಂ.ಎಂ.ಪಡಶೆಟ್ಟಿ. ಇವರ ಶಿಷ್ಯ ಬಳಗ ಹಾಗೂ ಸಾಹಿತ್ಯದ ಅಭಿಮಾನಿಗಳು ಸೇರಿ ಪಡಶೆಟ್ಟಿ ಅವರ ಬದುಕು-ಬರಹದ ಕುರಿತು ರಚಿಸಿರುವ ಅಭಿನಂದನಾ ಗ್ರಂಥ ’ನಿರಾಳ’.

ಈ ಕೃತಿಯಲ್ಲಿ ಪಡಶೆಟ್ಟಿ ಅವರ ವೈಯಕ್ತಿಕ ಜೀವನದ ಕುರಿತು ’ಒಡನಾಡಿಗಳು ಕಂಡಂತೆ’, ಜಾನಪದ ಲೋಕದ ಸಂಸ್ಕೃತಿ ಪ್ರತಿನಿಧಿಸುವ ಲೇಖನಗಳು ’ಬಾಗಿಲಿಗೆ ಬಂದವರು’ ಹಾಗೂ ಅವರ ಕೃತಿಗಳ ಕುರಿತು ’ಕೃತಿಗಳ ಅವಲೋಕನ’ ಎಂಬ ಮೂರು ವಿಭಾಗಗಳಲ್ಲಿ ಪಡಶೆಟ್ಟಿ ಅವರ ಬದುಕು-ಬರಹದ ಕುರಿತು ಅವಲೋಕಿಸಲಾಗಿದೆ. ’ಬಾಗಿಲಿಗೆ ಬಂದವರು’ ಅನ್ನುವ ಶಿರ್ಷಿಕೆಯಡಿಯಲ್ಲಿ ಜಾನಪದ ಲೋಕದ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲಾವಿದರುಗಳ ಬದುಕಿನ ಸಮಗ್ರ ವಿವರಗಳು ದಾಖಲಾಗಿವೆ. 

ಪಡಶೆಟ್ಟಿ ಅವರ ಅಭಿನಂದನ ಗ್ರಂಥವು ಅವರ ವೈಯಕ್ತಿಕ ವಿವರಗಳಿಗಿಂತಲೂ ಹೆಚ್ಚಾಗಿ ಜಾನಪದೀಯರ ಬದುಕು ಹಾಗೂ ಅವರ ಸಾಂಸ್ಕೃತಿಕ  ಶ್ರೀಮಂತಿಕೆಯನ್ನೇ ಅನಾವರಣ ಮಾಡಿ ಸಂಶೋಧನಾ ಅಭ್ಯಾಸಿಗರಿಗೆ ಸಹಕಾರಿಯಾಗುವಂತಹ ಕೃತಿಯಾಗಿದೆ. ಈ ಗ್ರಂಥವನ್ನು ಶ್ರೀರಾಮ ಇಟ್ಟಣ್ಣನವರ, ಡಾ. ಚೆನ್ನಪ್ಪ ಕಟ್ಟಿ, ಮನು ಪತ್ತಾರ, ಎ.ಆರ್‌. ಹೆಗ್ಗನದೊಡ್ಡಿ, ಹಾಗೂ ಗುರುಳನಾಥ ಅರಳಗುಂಡಗಿ ಅವರು ಸಂಪಾದಿಸಿದ್ದಾರೆ.

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books