ಬಾಳಲೋಕ

Author : ಗುರುಪಾದ ಮರಿಗುದ್ದಿ

Pages 348

₹ 300.00




Year of Publication: 2022
Published by: ಅನುಪಮ ಪ್ರಕಾಶನ
Address: ಅಥಣಿ, ಸಾವಿತ್ರಿ ಸಾಧನ್, ಸತ್ಯಪ್ರಮೋದ್ ನಗರ, ಬೆಳಗಾವಿ ಜಿಲ್ಲೆ, ಅಥಣಿ - 591304\n
Phone: 9449625025

Synopsys

`ಬಾಳಲೋಕ’ ಡಾ. ಬಾಳಾಸಾಹೇಬ ಲೋಕಾಪುರ ಅವರ ಅಭಿನಂದನ ಗ್ರಂಥವಾಗಿದೆ. ಗುರುಪಾದ ಮರಿಗುದ್ದಿ ಹಾಗೂ ವಿಜಯಕುಮಾರ ಕಟಗಿಹಳ್ಳಿಮಠ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. 'ಬಾಳಲೋಕ'ದಲ್ಲಿ ಮೂರು ಭಾಗಗಳಿವೆ. ಕನ್ನಡ ಕಥನ ಪರಂಪರೆಯ ಸ್ಕೂಲ ಪರಿಚಯ ಮಾಡಿಕೊಡುವ ಸಲುವಾಗಿ ಮೊದಲ ಭಾಗದಲ್ಲಿ ಹದಿನಾಲ್ಕು ಲೇಖನಗಳು ಸಂಕಲಿತವಾಗಿವೆ. ಜನಪದ ಕಥೆಗಳಿಂದ ಹಿಡಿದು ಆಧುನಿಕ ಸಣ್ಣ ಕತೆಗಳವರೆಗಿನ ಪ್ರಮುಖ ಪ್ರಯೋಗಗಳನ್ನು ಲೇಖಕರು ಅಧ್ಯಯನಪೂರ್ಣ ಶ್ರಮಪೂರ್ಣ ಲೇಖನಗಳಿಂದ ಎದುರಿಗಿಟ್ಟಿದ್ದಾರೆ. ಶಾಸನ, ಹರಿದಾಸರ, ಚಾರಣ ಕವಿಗಳ ಕಥನ ಮಾದರಿಗಳನ್ನು ಸೇರಿಸಲು ಪ್ರಯತ್ನ ಪಟ್ಟರೂ, ಲೇಖಕರ ಸೂಕ್ತ ಸ್ಪಂದನೆ ಸಾಧ್ಯವಾಗದೆ, ಅವು ಇಲ್ಲಿ ಸೇರಿಲ್ಲ ಎಂಬುದನ್ನೂ ನಾವು ಇಲ್ಲಿ ದಾಖಲಿಸಬೇಕಿದೆ. ಸಮಾಧಾನದ ಅಂಶವೆಂದರೆ, ನಮ್ಮ ವಿನಂತಿಯನ್ನು ಮಾನ್ಯಮಾಡಿ ಲೇಖನ ಬರೆದು ಕಳಿಸಿದ ಲೇಖಕರ ಲೇಖನಗಳು ಮುಂದೆ ಅಧ್ಯಯನಕ್ಕೆ ಆಕರಗಳಾಗಿ ನಿಲ್ಲುವಂತಿವೆ. ಅದರಂತೆ ಡಾ. ಲೋಕಾಪುರರ ಕೃತಿಗಳ ಬಗೆಗೆ ವಿಮರ್ಶಾ ಲೇಖನಗಳು ಎರಡನೆಯ ಭಾಗದಲ್ಲಿವೆ. ಇವುಗಳಿಂದ ಅವರ ಕೃತಿಗಳ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂಬ ಭರವಸೆ ನಮಗಿದೆ. ಈ ಎರಡೂ ಭಾಗಗಳಲ್ಲಿಯ ಲೇಖನಗಳು ಅಧ್ಯಯನಶೀಲರಿಗೆ, ಸಂಶೋಧಕರಿಗೆ, ವಿಮರ್ಶಕರಿಗೆ ಆಕರವಾಗಬೇಕು ಎಂಬ ಯೋಚನೆ ನಮಗೆ ಇತ್ತು, ಅದು ಇಲ್ಲಿ ಸಾಧ್ಯವಾಗಿದೆ. ಮೂರನೆಯ ಭಾಗದಲ್ಲಿ ಡಾ. ಲೋಕಾಪುರರ ಬಾಲ್ಯ, ತಾರುಣ್ಯ ಕಾಲದ ಆತ್ಮಕಥನ ವಿವರ ಭಾಗಶಃ ಬಂದಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books