ಶರಣಶ್ರೀ

Author : ಎಂ.ಎಂ. ಕಲಬುರ್ಗಿ

Pages 1




Published by: ಶಿವಮೂರ್ತಿ ಶಿವಶರಣರ ಶೂನ್ಯಪೀಠಾರೋಹಣ ಬೆಳ್ಳಿಹಬ್ಬ ಸಮಿತಿ
Address: ಮುರುಘಾಮಠ, ಚಿತ್ರದುರ್ಗ

Synopsys

ಬಹುದೊಡ್ಡ ಪರಂಪರೆ ಹೊಂದಿರುವ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶಿವಶರಣರ ಶೂನ್ಯ ಪೀಠಾರೋಹಣದ ಬೆಳ್ಳಿಹಬ್ಬದ ನೆವದಲ್ಲಿ ಮೂಡಿಬಂದ ಕೃತಿ ಇದು. ಗ್ರಂಥದ ಪ್ರಧಾನ ಸಂಪಾದಕ ಡಾ. ಎಂ.ಎಂ. ಕಲಬುರ್ಗಿ.  ಸಂಪಾದಕರು ಡಾ. ಟಿ.ಆರ್‌. ಚಂದ್ರಶೇಖರ. ವಿದೇಶಿಯರ ದೃಷ್ಟಿಯಲ್ಲಿ ಲಿಂಗಾಯತ ಧರ್ಮ, ಸ್ವಾತಂತ್ಯ್ರಪೂರ್ವ ಜಿಲ್ಲಾ ಗೆಜೆಟಿಯರುಗಳಲ್ಲಿ ಲಿಂಗಾಯತ ಧರ್ಮ, ಸಮಾಜ ವಿಜ್ಞಾನಿಗಳ ದೃಷ್ಟಿಯಲ್ಲಿ ಲಿಂಗಾಯತರು, ಇತಿಹಾಸ, ಅಭಿನಂದನೆ-ಅಭವಂದನೆ ಎಂಬ ವರ್ಗಗಳನ್ನು ಗ್ರಮಥ ಒಳಗೊಂಡಿದೆ. ಸಾಮಾನ್ಯ ಅಭಿನಂದನಾ ಗ್ರಂಥದಂತೆ ಕಂಡರೂ ಅದರ ವಿಶಿಷ್ಟ ತಿರುಳಿನ ಕಾರಣಕ್ಕೆ ಕೃತಿಗೆ ತನ್ನದೇ ಆದ ಮಹತ್ವ ಇದೆ.
 

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books