ದಕ್ಷಿಣ ಕನ್ನಡದ ಸಾರಸ್ವತ ಪರಂಪರೆ

Author : ಶ್ರೀನಿವಾಸ ಹಾವನೂರ

Pages 188

₹ 50.00




Year of Publication: 2004
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

ಮುದ್ದಣ್ಣನಿಂದ ಕಾರಂತರ ವರೆಗಿನ ಹಿರಿಯ ಸಾಹಿತ್ಯಕರ ಸಾಧನೆ ಕುರಿತು ಡಾ.ಶ್ರೀನಿವಾಸ ಹಾವನೂರ ಅವರು ರಚಿಸಿರುವ ಕೃತಿ ದಕ್ಷಿಣ ‘ಕನ್ನಡದ ಸಾರಸ್ವತ ಪರಂಪರೆ’. ಈ ಕೃತಿಗೆ ಪಾದೇಕಲ್ಲು ವಿಷ್ಣುಭಟ್ಟ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಡಾ. ಹಾವನೂರರು ಬಹು ವಿಚಿತ್ರವಾದ ಮಾಹಿತಿಕೋಶವೆಂದರೆ ತಪ್ಪಾಗದು. ಎಲ್ಲೆಲ್ಲಿಂದಲೋ ಹೇಗೋ ಅವರು ಮಾಹಿತಿಗಳನ್ನು ಕಲೆಹಾಕುತ್ತಾರೆ. ಅವುಗಳನ್ನು ಬೇಕಾದಲ್ಲಿ ಜೋಡಿಸುತ್ತಾರೆ. ಅವುಗಳಿಗೆ ರೂಪಕೊಟ್ಟು ಅಮೂಲ್ಯ ವಿಷಯಗಳಾಗಿ ಪರಿವರ್ತಿಸುತ್ತಾರೆ. ಅವರು ಬರೆದಾಗ ಚಿಕ್ಕಪುಟ್ಟ ವಿವರಗಳೂ ನಮಗೆ ಮಹತ್ವಪೂರ್ಣವಾಗಿ ಕಾಣಿಸುತ್ತವೆ. ಬರೆದು ಹರಿದೆಸೆವ ಕಾಗದಗಳ ಚೂರುಗಳಲ್ಲಿಯೂ ಡಾ.ಹಾವನೂರರಿಗೆ ಮುಖ್ಯ ವಿಷಯಗಳು ಕಾಣಿಸುತ್ತವೆ. ಅಮಂತ್ರಮಕ್ಷರಂ ನಾಸ್ತಿ ಎಂದು ತೊಡಗುವ ಸುಭಾಷಿತದಲ್ಲಿ. ನಿಷ್ಪ್ರಯೋಜಕಗಳೆಂದು ಭಾವಿಸಲಾಗುವ ವಸ್ತುಗಳನ್ನು ಜೋಡಿಸಿ ಅವುಗಳಿಗೆ ಬೆಲೆ ತರುವ ಯೋಜಕನು ಮಾತ್ರ ದುರ್ಲಭ ಎಂದು ಹೇಳಿದೆ. ಡಾ. ಹಾವನೂರರು ಆ ದುರ್ಲಭವೆಂಬ ಯೋಜಕರೊಳಗೊಬ್ಬರು ಎಂದಿದ್ದಾರೆ ಪಾದೇಕಲ್ಲು ವಿಷ್ಣುಭಟ್ಟ. ಜೊತೆಗೆ ದಕ್ಷಿಣ ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿ.ಶ. 19ನೇ ಶತಮಾನದ ಕೊನೆ ಹಾಗೂ 20ನೆಯ ಶತಮಾನದಲ್ಲಿ ಮುಖ್ಯವ್ಯಕ್ತಿಗಳೆಂದು ವಿವಿಧ ಕಾರಣಗಳಿಂದ ಪರಿಗಣಿತರಾದ ಮುದ್ದಣ್ಣ, ಹಟ್ಟಿಯಂಗಡಿ ನಾರಾಯಣರಾಯರು, ಪೇಜಾವರ ಸದಾಶಿವರಾಯರು, ಎಮ್. ಗೋವಿಂದ ಪೈಗಳು, ಶಿವರಾಮ ಕಾರಂತರು- ಈ ಐವರ ಬಗೆಗೆ ಈಗಾಗಲೇ ಸಾಕಷ್ಟು ಎನ್ನುವಂತೆ ಬರವಣಿಗೆಗಳು ಬಂದಿವೆ. ಆದರೆ ಡಾ. ಹಾವನೂರರು ಬರೆದ ಈ ಲೇಖನಗಳಲ್ಲಿ ಮತ್ತೂ ಹೊಸ ವಿಷಯಗಳಿವೆ, ಹೊಸ ನೋಟಗಳು, ಹೊಳಹುಗಳು ಇವೆ. ಈ ಲೇಖಕರ ವೈಯಕ್ತಿಕ ಜೀವನದ ವಿವರಗಳು ಅವರನ್ನು ನಾವು ಇನ್ನಷ್ಟು ನೆನೆಯುವಂತೆ ಮಾಡಿವೆ. ಲೇಖಕರ ಜೀವನ ವಿವರಗಳು ಕವಿಚರಿತ್ರೆಯ ಒಂದು ಭಾಗವೇ ಸರಿ. ಲೇಖಕರನ್ನು ಗೌರವಿಸುವ ಓದುಗರ ಸಮುದಾಯದಲ್ಲಿ ಆ ಲೇಖಕರ ಜೀವನದ ಬಗೆಗೆ ಕುತೂಹಲವಿರುವುದು ಸಹಜ. ಹಾವನೂರರ ಬರಹಗಳು ಆ ವಿವರಗಳನ್ನು ಎಲ್ಲಿಯೂ ಇತಿಹಾಸಕ್ಕೆ ಅಪಚಾರ ಒದಗದಂತೆ ನಿರೂಪಿಸುತ್ತವೆ. ತಪ್ಪಾದ ಮಾಹಿತಿಗಳನ್ನು ಸರಿಪಡಿಸುತ್ತವೆ ಎಂದಿದ್ದಾರೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books