ಆರ್ಯಾವರ್ತ

Author : ಗಿರಡ್ಡಿ ಗೋವಿಂದರಾಜ

Pages 178

₹ 150.00




Year of Publication: 2005
Published by: ಜಡಭರತ ಪ್ರಕಾಶನ
Address: ಲಕ್ಷ್ಮಿ ಭವನ, ಸುಭಾಷ್ ರಸ್ತೆ ಧಾರವಾಡ - 580001
Phone: 08362441823

Synopsys

ಆರ್ಯ (ಆಚಾರ್ಯ ಪಿ.ಆರ್) ಅವರು ಚಿತ್ರಕಲಾವಿದ, ಸಾಹಿತಿ, ನಾಟಕಕಾರರಾಗಿ ಬಹುಮುಖ ಪ್ರತಿಭೆಯುಳ್ಳವರು. ಉಡುಪಿಯ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಸ್ವಾಮೀಜಿಯ ಪಟ್ಟವನ್ನು ತ್ಯಜಿಸಿ ಜಡ್ಡು ಕಟ್ಟಿದ ಸಂಪ್ರದಾಯಕ್ಕೆ ಶರಣು ಹೊಡೆದು ಪೀಠ ತ್ಯಾಗ ಮಾಡಿದವರು. ಬ್ಯಾಂಕಿನಲ್ಲಿ ವೃತ್ತಿ ಜೀವನವನ್ನು ಆರಿಸಿಕೊಂಡು ಚಿತ್ರಕಲೆ, ಸಾಹಿತ್ಯ ಕೃಷಿಯನ್ನು ಮುಂದುವರೆಸಿ ಚಿತ್ರಕಲೆಯ ಏಕವ್ಯಕ್ತಿ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ತಮ್ಮ ಕಲಾಸಕ್ತಿಯನ್ನು ತೋರಿದವರು. ಇಂತಹ ಧೀಮಂತ ಕಲಾ ಪ್ರತಿಭೆಯ ಸಾಹಿತ್ಯ, ಕಲಾಪ್ರೇಮವನ್ನು ಕಂಡ ಅವರ ಶಿಷ್ಮವೃಂದ, ಸಾಹಿತ್ಯ ಮಿತ್ರರೆಲ್ಲರೂ ಅವರ ಕುರಿತಾದ ಒಂದು ವಿಮರ್ಶಾತ್ಮಕವಾದ ಗ್ರಂಥವನ್ನು ಸಾಹಿತಿ ಗಿರಡ್ಡಿ ಗೋವಿಂದರಾಜರ ಪ್ರಧಾನ ಸಂಪಾದನೆಯಲ್ಲಿ ’ಆರ್ಯಾವರ್ತ’ ಎಂಬ ವಿಮರ್ಶಾ ಲೇಖನಗಳ ಸಂಗ್ರಹಗಳೇ ಅವರ ಅಭಿನಂದನಾ ಗ್ರಂಥವಾಗಿಯೂ  ಈ ಪುಸ್ತಕ ರೂಪವನ್ನು ಪಡೆಯಿತು. 

About the Author

ಗಿರಡ್ಡಿ ಗೋವಿಂದರಾಜ
(22 September 1939 - 11 May 2018)

ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್‌ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...

READ MORE

Related Books