ಬಂಡಾಯದ ಬೋಳಬಂಡೆಪ್ಪ

Author : ರಮೇಶ್ ಅರೋಲಿ

Pages 102

₹ 90.00




Year of Publication: 2012
Published by: ಪಲ್ಲವ ಪ್ರಕಾಶನ

Synopsys

ಬಂಡಾಯದ ಬೋಳಬಂಡೆಪ್ಪ : ಬದುಕು ಬರಹ ಸಂಘಟನೆ ರಮೇಶ ಅರೋಲಿ ಅವರ ಕೃತಿಯಾಗಿದೆ. ಇದು 1988ರಲ್ಲಿ ಆಸುಪಾಸಿನಲ್ಲಿ ನನ್ನೂರಿನ ಅಸ್ಕಿಹಾಳದ ಜನತಾ ಕಾಲೋನಿಯಲ್ಲಿ ಮೊಟ್ಟ ಮೊದಲು ನನ್ನ ಕಿವಿಸಜಟೆಯ ಮೇಲೆ ಬಿದ್ದ ಘೋಷಣೆ. ಆಗಷ್ಟೆ ಅಷ್ಟೊ ಇಷ್ಟೊ ಸಾರಿ ಕಲಿತು ಸರಕಾರಿ ನೌಕರಿ ಪಡೆದು ಎಚ್ಚೆತ್ತ ಕೀರಿ ಯುವಕರು ಅಂಬೇಡ್ಕರ್ ಯುವಕ ಮಂಡಳಿ', 'ಭೀಮಸೇವೆ'ಯ ಹೆಸರಿನಡಿ ಒಗ್ಗೂಡಿ, ಕೋಟು-ಬೂಟುಧಾರಿ ಬಾಬಾ ಸಾಹೇಬರ ಗಂಬೀರ ಮುಖದ ಆ ಫೋಟೋ ಹೊತ್ತು ಎತ್ತಿನ ಬರೀಲಿ ಮೆರವಣಿಗೆ ಬಂದರೆ, ಕೇರಿಗಳಿಗೆ ಅದೇನೋ ಹೊಸ ಹುಮ್ಮಸ್ಸು, ಚೈತನ್ಯ ಬಂದುಬಿಡುತ್ತಿತ್ತು. ಎಂದು ಲೇಖಕ ರಮೇಶ ಅರೋಲಿ ಲೇಖಕರ ಮಾತlಲ್ಲಿ ತಿಳಿಸಿದ್ದಾರೆ.

About the Author

ರಮೇಶ್ ಅರೋಲಿ
(10 July 1982)

ಕವಿ ರಮೇಶ ಅರೋಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಎಳೆಯ ಪಾಪದ ಹೆಸರು ನಿಮ್ಮಂತೆ ಇಟ್ಟುಕೊಳ್ಳಿ (2010), ಜುಲುಮೆ (2014), ಒಳ ಮೀಸಲಾತಿ-ಮುಟ್ಟಲಾರದವನ ತಳಮಳ (ಸಹಸಂಪಾದನೆ) (2014), ಬಂಡಾಯದ ಬೋಳಬಂಡೆಪ್ಪ (ರಾಯಚೂರಿನ ದಲಿತ-ಬಂಡಾ ಚಳವಳಿಗಾರ ಬೋಳಬಂಡೆಪ್ಪನ ಬದುಕು-ಬರಹ), ತೀನ್‌ ಕಂದೀಲ್‌ (ನಾಟಕ) "ಬಿಡು ಸಾಕು ಈ ಕೇಡುಗಾಲಕ್ಕಿಷ್ಟು" (2021) (ಕವನ ಸಂಕಲನ) ಕೃತಿಗಳನ್ನು ರಚಿಸಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಡಾ. ಜಿ.ಎಸ್‌. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಬಿಡಿಗವಿತೆಗಳಿವೆ ಸಂಚಯ, ಸಂಕ್ರಮಣ, ಪ್ರಜಾವಾಣಿ ಕಾವ್ಯ ಸ್ಪರ್ಧೆಯಲ್ಲಿ ...

READ MORE

Related Books