ನಮ್ಮ ಶಾಮಣ್ಣ

Author : ಡಿ.ಎಸ್.ನಾಗಭೂಷಣ

Pages 452

₹ 375.00




Year of Publication: 2016
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು ವಿದ್ಯಾನಗರ, ಶಿವಮೊಗ್ಗ
Phone: 9449174662

Synopsys

ಸಮಾಜವಾದಿ ಧುರೀಣ ಕಡಿದಾಳು ಶಾಮಣ್ಣ ಅವರ ಗೌರವ ಗ್ರಂಥ-ನಮ್ಮ ಶಾಮಣ್ಣ. ಲೇಖಕರಾದ ಡಿ.ಎಸ್. ನಾಗಭೂಷಣ, ಎಂ.ಜಿ. ನಟರಾಜ್ ಹಾಗೂ ಬಿ. ಚಂದ್ರೇಗೌಡ ಅವರು ಗ್ರಂಥ ಸಂಪಾದಕರು. ಕಡಿದಾಳು ಶಾಮಣ್ಣ ಅವರು ಭೂ ಸುಧಾರಣೆ ಸೇರಿದಂತೆ ರೈತರ ಪರವಾಗಿ ಹತ್ತು ಹಲವು ಹೋರಾಟಗಳನ್ನು ಮಾಡಿದವರು. ಲೋಹಿಯಾವಾದಿಗಳು. ರೈತರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಮಾತನಾಡಿದವರು. ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವ ಹಕ್ಕು ಕೇವಲ ರೈತರಿಗೆ ಮಾತ್ರ ಇದೆ ಎಂದು ಪ್ರತಿಪಾದಿಸಿದವರು. ಕಡಿದಾಳು ಶಾಮಣ್ಣನವರ ಅಭಿಮಾನಿಗಳು ಜೊತೆಗೂಡಿ ಅರ್ಪಿಸಿದ ಗೌರವ ಗ್ರಂಥವಿದು.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Related Books