ಕಲ್ಯಾಣದೀಪ್ತಿ

Author : ಎಂ.ಎಂ. ಕಲಬುರ್ಗಿ

Pages 533

₹ 400.00




Published by: ಡಾ. ಬಸವಲಿಂಗ ಪಟ್ಟದ್ದೇವರ ಅಭಿನಂದನಾ ಗ್ರಂಥ ಸಮಿತಿ
Address: ಡಾ. ಬಸವಲಿಂಗ ಪಟ್ಟದ್ದೇವರ ಅಭಿನಂದನಾ ಗ್ರಂಥ ಸಮಿತಿ, ಹಿರೇಮಠ ಸಂಸ್ಥಾನ, ಬಾಲ್ಕಿ.

Synopsys

ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರ ಅಭಿನಂದನಾ ಗ್ರಂಥ ಇದು. ಡಾ. ಗುರುಲಿಂಗಪ್ಪಾ ಧಬಾಲೆ ಕೃತಿಯನ್ನು ಸಂಪಾದಿಸಿದ್ದು ಇದರ ಪ್ರಧಾನ ಸಂಪಾದಕರು ಡಾ. ಎಂ.ಎಂ. ಕಲಬುರ್ಗಿ.

“ಉಪೇಕ್ಷಿತ ಜ್ಞಾನಕ್ಷೇತ್ರವನ್ನು ಬೆಳಕಿಗೆ ತರಬೇಕೆಂಬ ಉದ್ದೇಶದಿಂದ ....ಆರಂಭದಲ್ಲಿ ಶ್ರೀ ಮಠದ-ಶ್ರೀಗಳ ಸಾಧನೆ ಅಂತ್ಯದಲ್ಲಿ ಈ ಸಾಧನೆಗಳ ಸಮಗ್ರವಿವರ, ಮಧ್ಯದಲ್ಲಿ ಕಲ್ಯಾಣ ಕರ್ನಾಟಕದ ತತ್ವಕಾರರು ವಿಷಯ ಕುರಿತ ಅಭ್ಯಾಸಪೂರ್ಣ ಪ್ರಭಂಧಗಳನ್ನು ಸಂಯೋಜಿಸಲಾಗಿದೆ....ಈ ಸಾಹಿತ್ಯಪ್ರಕಾರದ ಬಿಡಿಯಾದ ಅಧ್ಯಯನ ಈವರೆಗೆ ಜರುಗಿದ್ದರೂ ಒಂದು ಸಮಗ್ರ ಅಧ್ಯಯನದ ಕೊರತೆ...ಉಳಿದುಕೊಂಡಿದ್ದಿತು. ಇದನ್ನು ಪೂರೈಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದ ತತ್ವಪದಕಾರರು ಎಂಬ ವಿಷಯಕ್ಕೆ ಈ ಅಭಿನಂದನ ಗ್ರಂಥದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ” ಎಂದು ಕಲಬುರ್ಗಿ ಹೇಳಿದ್ದಾರೆ.

ಅರವತ್ತು ಜನ ವಿದ್ವಾಂಸರು ವಿವಿಧ ವಿಷಯಗಳನ್ನು ಕೃತಿಯಲ್ಲಿ ಮಂಡಿಸಿದ್ದಾರೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books