ಆಬೂವಿಂದ ಬರಾಮಕ್ಕೆ

Author : ಶಿವರಾಮ ಕಾರಂತ

Pages 175

₹ 99.00




Year of Publication: 2020
Published by: ಸಪ್ನ ಬುಕ್ ಹೌಸ್
Address: # 11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09
Phone: 08040114455

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಪ್ರವಾಸ ಕಥನ-ಅಬೂವಿಂದ ಬರಾಮಕ್ಕೆ. ಕಥೆ, ಕಾದಂಬರಿ, ವಿಜ್ಞಾನ, ಕಲೆ, ಚಿತ್ರಕಲೆ, ವಾಸ್ತುಶಿಲ್ಪ, ಮಕ್ಕಳಿಗಾಗಿ ವಿಜ್ಞಾನ ಹೀಗೆ ಹತ್ತು ಹಲವು ವಲಯಗಳಲ್ಲಿ ಕೃಷಿ ಮಾಡಿರುವ ಲೇಖಕರು ಪ್ರವಾಸ ಕಥನ ದಲ್ಲೂ ಉತ್ತಮ ಸಾಹಿತ್ಯ ಕೃತಿಗಳನ್ನು ನೀಡಿದ್ದು ಆ ಪೈಕಿ -‘ಅಬೂವಿಂದ ಬರಾಮಕ್ಕೆ’ ಎಂಬುದು ಒಂದು ಪ್ರವಾಸ ಕಥನ. ರಾಜಸ್ತಾನದ ಅಬೂ ಎಂಬ ಸ್ಥಳದಿಂದ ಬರಾಮತನಕ -ತಮ್ಮ ಪ್ರವಾಸದ ವಿಚಾರಗಳನ್ನು ವ್ಯಕ್ತ ಮಾಡಿದ್ದಾರೆ. ದೆಹಲಿ, ಆಗ್ರ, ರಾಜಸ್ಥಾನದ ಜಯಪುರ, ಕೊಲ್ಕತ್ತಾ, ಕಾಶಿ,  ಮೂಲಕ ಓಡಿಸ್ಸಾದ ಬರಾಮವರೆಗೂ ಅವರು ಕಂಡ, ದೃಶ್ಯಗಳ, ಪಡೆದ ಮಾಹಿತಿಗಳ ಕುರಿತ ಒಳನೋಟಗಳಿವೆ. ಐತಿಹಾಸಿಕ ಸಂಗತಿಗಳ ಮೇಲೂ ಅವರು ಸ್ಪಂದನೆ ಕಾಣಬಹುದು. ತಾಜಮಹಲ್, ಅಜ್ಮೀರ ದರ್ಗಾದ ಮಹಾದ್ವಾರ, ಅಬೂ ದೇವಾಲಯ, ನವರಂಗ, ದೆಹಲಿಯ ಪಾರ್ಲಿಮೆಂಟ್ ಸೀಮ್ಲಾದ ನೈಸರ್ಗಿಕ ಸೌಂದರ್ಯ, ಫತ್ತೇಪುರ ಸಿಕ್ರಿಯಲ್ಲಿರುವ ಪಂಚಮಹಲು, ಕಾಶಿಯ ಹನುಮಾನ್ ಘಾಟ್ ಹೀಗೆ ಪಟ್ಟು ಬೆಳೆಯುತ್ತಾ ಹೋಗಿದೆ. ಕಥನ ಶೈಲಿ, ಸರಳ ಭಾಷೆ, ವೈವಿಧ್ಯಮಯ ದೃಷ್ಟಿಕೋನ, ವಿಶ್ಲೇಷಣೆಯ ತೀಕ್ಷಣತೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1950ರಲ್ಲಿ (ಪುಟ: 147)  ಪ್ರವಾಸ ಕಥನದ ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books