
‘ಜನ ಗಣ ಮನ’ ಲೇಖಕ ಎಚ್.ಎಸ್. ರಾಘವೇಂದ್ರರಾವ್ ಅವರು ಬಂಗಾಳ ,ಮತ್ತು ಒರಿಸ್ಸಾ ರಾಜ್ಯಗಳಿಗೆ ಪ್ರವಾಸ ಕೈಗೊಂಡು ಬರೆದ ಕಥನ ಕೃತಿ. ಕೃತಿಗೆ ಬೆನ್ನುಡಿ ಬರೆದಿರುವ ಜಿ.ಎಸ್. ಶಿವರುದ್ರಪ್ಪ ಅವರು, ‘ಪ್ರವಾಸ ಸಾಹಿತ್ಯ ಇತ್ತಿಚೆಗೆ ಕನ್ನಡದಲ್ಲಿ ರೂಪುಗೊಳ್ಳುತ್ತಿರುವ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ತುಂಬ ಆಕರ್ಷಕವಾದ ಈ ಪ್ರಕಾರ, ಈಗಾಗಲೇ ಹಲವರ ಕೈಯಲ್ಲಿ ಕೇವಲ ಹರಟೆಯಾಗುತ್ತ, ಅಥವಾ ದೈನಂದಿನ ಅನುಭವ-ಅನಿಸಿಕೆಗಳ ವರದಿಯಾಗುತ್ತ, ಇಲ್ಲವೆ ನೀರಸ ಉಪನ್ಯಾಸವಾಗುತ್ತ ಪರಿಣಮಿಸಿದೆ ಎಂಬುದು ಅಪರಿಚಿತವಾದ ಸಂಗತಿಯೇನಲ್ಲ. ಆದರೆ, ಪ್ರವಾಸದ ಅತ್ಯಂತ ಆಕರ್ಷಕವೂ ದಟ್ಟವೂ ಆದ ಅನುಭವಗಳನ್ನು, ತಕ್ಕ ವಿವೇಚನೆಯಿಂದ, ಎಚ್ಚರದಿಂದ ಮತ್ತು ಕಲಾತ್ಮಕತೆಯಿಂದ ನಿರ್ವಹಿಸಿದ ಕೃತಿಗಳು ತೀರಾ ವಿರಳವೆಂದೇ ಹೇಳಬೇಕು. ರಾಘವೇಂದ್ರರಾವ್ ಅವರ ‘ಜನ ಗಣ ಮನ’, ಇಂಥ ವಿರಳ ಕೃತಿಗಳ ಸಾಲಿಗೆ ಖಂಡಿತವಾಗಿಯೂ ಸೇರುವಂಥವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.…
©2025 Book Brahma Private Limited.