ಕಲಬುರ್ಗಿಯಿಂದ ಕಾಠಮಂಡುವಿನವರೆಗೆ

Author : ಸಿದ್ಧರಾಮ ಹೊನ್ಕಲ್

Pages 120

₹ 80.00




Year of Publication: 2006
Published by: ಶ್ರೀ ಅಲ್ಲಮಪ್ರಭು ಪ್ರಕಾಶನ
Address: ಕಾವ್ಯಾಲಯ,ಲಕ್ಷ್ಮೀನಗರ, ಶಹಾಪುರ-585223.ಯಾದಗಿರಿ ಜಿಲ್ಲೆ.
Phone: 9945922151

Synopsys

ಇದೊಂದು ಪ್ರವಾಸ ಕಥನ. ಉತ್ತರ ಕರ್ನಾಟಕ ಕಲಬುರ್ಗಿಯಿಂದ ನೇಪಾಳದ ಕಾಠಮಂಡುವಿಗೆ ಬೆಳೆಸಿದ ಪ್ರವಾಸದ ಅನುಭವವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಪ್ರವಾಸದಲ್ಲಿ ಆಸಕ್ತಿ ಹೊಂದಿರುವ ಕೆಲವರ ತಂಡ ನೇಪಾಳವರೆಗೆ ಹಾಗೂ ಬುದ್ಧಗಯಾ, ಸೂರ್ಯದೇವಾಲಯ ಸುತ್ತಿದ ಅನುಭವ ಕಥನ ಇದು. ದೇಶ ವಿದೇಶದ ಸುಂದರ ನೆನಪುಗಳನ್ನು ಹಾಸ್ಯಮಯವಾಗಿ ಕಟ್ಟಿಕೊಟ್ಟ ಕೃತಿ ಇದಾಗಿದೆ.

ಈ ಕೃತಿಗೆ ಸೇಡಂ ದ ವಿಶ್ವ ಸೇವಾ ಸಂಸ್ಥೆಯಿಂದ ವಿಶ್ವ ಪುರಸ್ಕಾರ ದೊರೆತಿದೆ. 

About the Author

ಸಿದ್ಧರಾಮ ಹೊನ್ಕಲ್
(22 December 1960)

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು.  ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...

READ MORE

Related Books