ಗಾಂಧೀಯ ನಾಡಿನಲ್ಲಿ

Author : ಸಿದ್ಧರಾಮ ಹೊನ್ಕಲ್

Pages 128

₹ 80.00




Year of Publication: 2007
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಕಾವ್ಯಾಲಯ, ಲಕ್ಷ್ಮೀನಗರ, ಶಹಾಪುರ, ಯಾದಗಿರಿ ಜಿಲ್ಲೆ -585223
Phone: 9945922151

Synopsys

  ಪೋರಬಂದರ್, ಗುಜರಾತ್ ರಾಜ್ಯದ ಒಂದು ಪ್ರಾಚೀನ ಬಂದರು ನಗರವಾಗಿದೆ. ಕತಿಬಾರ್ ನ ಕರಾವಳಿ ತೀರದಲ್ಲಿರುವ ಈ ನಗರವು  ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳವಾಗಿದೆ. ಹೊನ್ಕಲ್ ಅವರು ಗುಜರಾತನ ಪ್ರವಾಸದ ಕುರಿತು ಗಾಂಧೀಯ ನಾಡಿನಲ್ಲಿ ಎಂಬ ಪ್ರವಾಸಕಥನವಿದು. 

ಪೋರಬಂದರ ಮನೆಯಿಂದ ಪ್ರಾರಂಭವಾಗಿ  ಸಬರಮತಿ ಆಶ್ರಮ ದವರೆಗಿನ ಗಾಂಧೀಜಿಯ  ಬದುಕನ್ನು ಹಾಗೂ ಸಿದ್ದರಾಮ ಹೊನ್ಕಲ್ ಅವರು ತಾವು ಸುತ್ತಾಡಿದ ಗಾಂಧೀಯ ನಾಡಿನಲ್ಲಿನ ಸ್ಥಳಗಳನ್ನು  ತುಂಬ ಸೊಗಸಾಗಿ  ಚಿತ್ರಿಸಿದ್ದಾರೆ.   ಈ ಕೃತಿಗೆ ಬೆಂಗಳೂರಿನ ಅತಿಮಬ್ಬೆ ಪುರಸ್ಕಾರ ಹಾಗೂ  ಕಲಬುರ್ಗಿ ಸಂಸ್ಥೆಯೊಂದರ ಶ್ರೀ ವಿಜಯ ಪುರಸ್ಕಾರ ದೊರೆತು ಕನಿಷ್ಠ ಹತ್ತು ಸಾವಿರ ಪ್ರತಿಗಳು ಮಾರಾಟವಾಗಿವೆ. ಸೋಲಾಪುರ ವಿಶ್ವವಿದ್ಯಾಲಯದ  ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.

About the Author

ಸಿದ್ಧರಾಮ ಹೊನ್ಕಲ್
(22 December 1960)

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು.  ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...

READ MORE

Related Books