ಕಾವೇರಿಯಿಂದ ಮೇಕಾಂಗಿಗೆ

Author : ಸುಧಾ ಮೂರ್ತಿ

Pages 103

₹ 65.00




Year of Publication: 2019
Published by: ಸಪ್ನ ಬುಕ್ಸ್‌
Address: #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009
Phone: 08040114455

Synopsys

ಈಗಾಗಲೇ ಒಟ್ಟು 9ನೇ ಮುದ್ರಣ ಕಂಡಿರುವ ಪ್ರವಾಸ ಕಥನವಾದ ’ಕಾವೇರಿಯಿಂದ ಮೇಕಾಂಗಿಗೆ’ ಕೃತಿಯ ಲೇಖಕಿ ಸುಧಾಮೂರ್ತಿ. ’ನನ್ನ ಹುಟ್ಟೂರು ಶಿಗ್ಗಾವಿ. ಹಾವೇರಿ ಜಿಲ್ಲೆಯ ಚಿಕ್ಕ ಊರು....’ ಎಂದು ಆರಂಭವಾಗುವ ಈ ಕಥನವು ವಿಶ್ವದ ವಿವಿಧ ದೇಶಗಳನ್ನು ಸುತ್ತಾಡಿ, ನಂತರ ಬರೆಹಕ್ಕಿಳಿಸುವ ಲೇಖಕರು, ಕಥನದ ಕೊನೆಯಲ್ಲಿ ’ನಾವು ಎಷ್ಟೇ ಓದಲಿ, ಎಷ್ಟೇ ಚಿತ್ರ ನೋಡಲಿ, ನಿಜವಾಗಿ ಈ ಅನುಭವವೇ ಬೇರೆ. ನನ್ನ ಲೇಖನಿ, ನನಗೆ ತಿಳಿದ ಪದಕೋಶದಿಂದ ನಿಜವನ್ನು ಬಣ್ಣಿಸಲು ಅಸಮರ್ಥವಾಗಿದೆ’ ಎನ್ನುವ ಮೂಲಕ ಪ್ರವಾಸ ಕಥನವು ಎಷ್ಟೇ ಪ್ರಬಲವಾಗಿ-ಪ್ರಬುದ್ಧವಾಗಿ ಬರೆದರೂ ಅದು ಅಪೂರ್ಣವೇ ಎಂಬ ಸತ್ಯವನ್ನು ಹೇಳಲು ಹಿಂಜರಿದಿಲ್ಲ. ಅದು ಲೇಖಕನಿಗಿರಬೇಕಾದ ಪ್ರಾಮಾಣಿಕ ಬದ್ಧತೆ ಮಾತ್ರವಲ್ಲ; ಕೃತಿಯು ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಎಂಬುದಕ್ಕೂ ಸೂಚಕವಾಗಿರುತ್ತದೆ.

About the Author

ಸುಧಾ ಮೂರ್ತಿ
(18 August 1950)

ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್‌ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ.  ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.  ಸುಧಾ ಮೂರ್ತಿ ಅವರಿಗೆ ರೋಟರಿ ...

READ MORE

Related Books