ಪೂರ್ವದಿಂದ ಅತ್ಯಪೂರ್ವಕ್ಕೆ

Author : ಶಿವರಾಮ ಕಾರಂತ

Pages 352

₹ 216.00




Year of Publication: 2019
Published by: ಸಪ್ನ ಬುಕ್ ಹೌಸ್
Address: #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಪ್ರವಾಸ ಕಥನ -ಪೂರ್ವದಿಂದ ಅತ್ಯಪೂರ್ವಕ್ಕೆ. 

ಸಿಂಹಳ, ನೇಪಾಳ, ಬೀರುತ್, ಇರಾನ್, ಅಫಘಾನಿಸ್ತಾನ, ಹಾಂಕಾಂಗ್, ಜಪಾನ್ ದೇಶಗಳಲ್ಲಿ ಸಂಚರಿಸಿ, ಅನುಭವಗಳನ್ನು ಕಟ್ಟಿಕೊಟ್ಟ ಕೃತಿ ಇದು. ಸಿಂಹಳ ದೇಶದಲ್ಲಿ ಸಸ್ಯ ಸಂಪತ್ತು, ಕೇಂಡಿನಗರದ ಸರೋವರದ ವರ್ಣನೆ, ಕೇಂಡಿ ದೇವಾಲಯಗಳ ವರ್ಣನೆ ಇದೆ. ಭಾರತದ ಪ್ರತಿನಿಧಿಯಾಗಿ ಇರಾನ್ ದೇಶದ ರಾಜಧಾನಿ ಟೆಹರಾನ್ ನಗರಕ್ಕೆ ತೆರಳುವಾಗ ವಿಮಾನ ಸಂಸ್ಥೆಯ ಎಂಜಿನಿಯರುಗಳ ಮುಷ್ಕರದಿಂದಾಗಿ ಟೆಹರಾನ್ ಬದಲು ಲೆಬನಾನ್ ಗೆ ವಿಮಾನ ಪ್ರಯಾಣಿಸಿತ್ತು. ಅಲ್ಲಿಯ ಬೀರುತ್ ನಲ್ಲಿ ವಿಮಾನ ಇಳಿದಿತ್ತು. ಮುಂದಿನ ವ್ಯವಸ್ಥೆಯಾಗುವವರೆಗೂ ಒದು ದಿನದ ಕಾಲಾವಕಾಶವಿತ್ತು. ಈ ಅವಕಾಶವನ್ನು ಲೇಖಕರು ಬೀರುತ್ ನಗರ ವೀಕ್ಷಣೆಗೆ ಉಪಯೋಗಿಸಿಕೊಂಡರು. ಬೀರುತ್ ನಗರದಲ್ಲಿ ತಾವು ಕಂಡಿದ್ದನ್ನು ವಿವರಿಸಿದ್ದಾರೆ. ಇರಾನ್ ದೇಶ ಸುತ್ತಾಡಿದ ವಿವರವೂ ಇದೆ. ಅಫಘಾನಿಸ್ತಾನ ರಾಜಧಾನಿ ಕಾಬೂಲ್, ನಿಸರ್ಗ ನೋಟಗಳು, ಮೃಗಾಲಯ, ಮ್ಯೂಜಿಯಂ ಗಳನ್ನು ವಿವರಿಸಿದ್ದಾರೆ. ನೇಪಾಳದ ಪಶುಪತಿನಾಥ ದೇವಾಲಯ, ಚಂಗು ನಾರಾಯಣ ದೇವಾಲಯ, ನಂತರ ಭಾಟಗಾಮುವಿನ ದೇಗುಲಗಳು, ಭೈರವ ದೇವಾಲಯ, ನೇಪಾಲದಲ್ಲಿರುವ ಗೋಕರ್ಣ ಎಂಬ ಕ್ಷೇತ್ರ, ಪಶುರಕ್ಷಣಾ ಧಾಮ ಇತ್ಯಾದಿ ವಿವರಗಳಿವೆ. ಯಕ್ಷಗಾನ ಪ್ರದರ್ಶನಗಳನ್ನು ನೀಡಲು ಕೇಂದ್ರದ ಸಾಂಸ್ಕೃತಿಕ ಇಲಾಖೆಯಿಂದ  ಹಾಂಕಾಂಗ್ ಗೆ ತೆರಳಿದ್ದರಿಂದ ಲೇಖಕರು ಅಲ್ಲಿಯ ದೇಶೀಯ ವಿಚಾರ, ವ್ಯಾಪಾರಗಳ ವೈಭವ, ಚೀನಿಯರ ವಿಚಾರ ಇತ್ಯಾದಿ ವಿವರಗಳನ್ನು ನೀಡಿದ್ದಾರೆ. ‘ಆಧುನಿಕ ಯುಗದ ಸ್ಪರ್ಧೆಯಲ್ಲಿ ಜಪಾನಿಯರು ನಮಗಿಂತಲೂ ಮುಂದಕ್ಕೆ ಜಿಗಿದು ಓಡಿದ್ದು, ಮಾತ್ರವಲ್ಲ; ಎಷ್ಟೋ ವಿಷಯಗಳಲ್ಲಿ ಪಾಶ್ಚಾತ್ಯರನ್ನೂ ಮೀರಿಸಿದ್ದಾರೆ. ಆದ್ದರಿಂದ, ಈ ಬರಹಕ್ಕೆ ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಎಂಬ ಶೀರ್ಷಿಕೆ ನೀಡಿದ್ದಾಗಿ ಕಾರಂತರು ಹೇಳಿಕೊಂಡಿದ್ದಾರೆ. 

ಸಾಗರದ ಅಕ್ಷರ ಪ್ರಕಾಶನವು 1982ರಲ್ಲಿ (ಪುಟ: 227) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.  

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books