ಒಂದು ಸುಂದರ ದ್ವೀಪ ರಾಷ್ಟ್ರ

Author : ಯಾಕೂಬ್‌ ಖಾದರ್‌ ಗುಲ್ವಾಡಿ

Pages 92

₹ 40.00




Year of Publication: 2003
Published by: ಪುಸಕ ನಿಧಿ
Address: ಲಕ್ಷ್ಮೀ ಸದನ, ಗಾವಳಿ, ಪೋಸ್ಟ್‌ ಹಲ್ಯಾಡಿ

Synopsys

‘ಶ್ರೀಲಂಕಾ : ಒಂದು ಸುಂದರ ದ್ವೀಪ ರಾಷ್ಟ್ರ’ ಯಾಕೂಬ್‌ ಖಾದರ್‌ ಗುಲ್ವಾಡಿ ಅವರ ಕೃತಿಯಾಗಿದೆ. ಕ್ರಿಕೆಟ್ ಚೆಂಡು - ಬ್ಯಾಟ್‌ನೊಂದಿಗೆ ಕ್ರೀಡಾಪಟುವಾಗಿ ಶ್ರೀಲಂಕಾ ಸಂದರ್ಶಿಸಿದ ಯಾಕೂಬ್ ಅವರು ಬರುವಾಗ ಪೆನ್ನು - ಹಾಳೆ ಹಿಡಿದು ಪ್ರವಾಸ ಕಥನವನ್ನೂ ಬರೆದು ಮುಗಿಸಿರುವ ಅಪರೂಪದ ಬರಹಗಾರ, ಸುಂದರ ದ್ವೀಪ ಶ್ರೀಲಂಕಾ ಬಗ್ಗೆ ಸ್ವಾರಸ್ಯವಾಗಿ ಮೂಡಿಬಂದ ಈ ನಿರೂಪಣೆ ಇತರ ಪ್ರವಾಸಿಗಳಿಗೂ ಸಾಕಷ್ಟು ಮಾಹಿತಿ ಒದಗಿಸುತ್ತದೆ.

About the Author

ಯಾಕೂಬ್‌ ಖಾದರ್‌ ಗುಲ್ವಾಡಿ

ಯಾಕೂಬ್‌ ಖಾದರ್‌ ಗುಲ್ವಾಡಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಕನ್ನಡ ಭಾಷೆ , ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದರು. ಅವರು ಆ 90 ದಿನಗಳು’ ಸಿನಿಮಾದ ನಿರ್ದೆಶಕರಾಗಿ ಸಿನಿಮಾರಂಗದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದಾರೆ. ಕೃತಿಗಳು: ಶ್ರೀಲಂಕಾ ಒಂದು ಸುಂದರ ದ್ವೀಪ ರಾಷ್ಟ್ರ.  ...

READ MORE

Reviews

ಹೊಸತು-2004- ಮಾರ್ಚ್

ಕ್ರಿಕೆಟ್ ಚೆಂಡು - ಬ್ಯಾಟ್‌ನೊಂದಿಗೆ ಕ್ರೀಡಾಪಟುವಾಗಿ ಶ್ರೀಲಂಕಾ ಸಂದರ್ಶಿಸಿದ ಯಾಕೂಬ್ ಅವರು ಬರುವಾಗ ಪೆನ್ನು - ಹಾಳೆ  ಹಿಡಿದು ಪ್ರವಾಸ ಕಥನವನ್ನೂ ಬರೆದು ಮುಗಿಸಿರುವ ಅಪರೂಪದ ಬರಹಗಾರ, ಸುಂದರ ದ್ವೀಪ ಶ್ರೀಲಂಕಾ ಬಗ್ಗೆ ಸ್ವಾರಸ್ಯವಾಗಿ ಮೂಡಿಬಂದ ಈ ನಿರೂಪಣೆ ಇತರ ಪ್ರವಾಸಿಗಳಿಗೂ ಸಾಕಷ್ಟು ಮಾಹಿತಿ ಒದಗಿಸುತ್ತದೆ. ಜೊತೆಗೆ ಈ ರಾಷ್ಟ್ರವನ್ನು ನೋಡುವ ಬಯಕೆ ಉಂಟಾಗು ತ್ತದೆ. ಕೇವಲ ಹದಿನೇಳು ದಿನಗಳ ಅಲ್ಪಕಾಲದ ವಾಸ್ತವ್ಯದಲ್ಲಿ ಸಂಪಾದಿಸಿದ ವಿವರ ಈ ಪುಟ್ಟ ಪುಸ್ತಕದಲ್ಲಿ ದಾಖಲಾಗಿದೆ. ಬರವಣಿಗೆಯ ಉತ್ಸಾಹವೂ ಪುಟಿಯುವ ಚೆಂಡಿನಂತೆಯೇ ಇದೆ.

Related Books