ಯಾತ್ರಿ

Author : ನಾಗಲಕ್ಷ್ಮಿ ಹರಿಹರೇಶ್ವರ

Pages 202

₹ 135.00




Year of Publication: 2023
Published by: ಭಾರತೀ ಪ್ರಕಾಶನ
Address: # 10, ಬಿಸ್ಮಿಲ್ಲ ಬಿಲ್ಡಿಂಗ್, 1ನೇ ಮಾಳಿಗೆ ದಾದರ್, (ಬಿ.ಬಿ.ಸ್ಟೇಷನ್ ಎದುರು), ಮುಂಬೈ.

Synopsys

`ಯಾತ್ರಿ’ ನಾಗಲಕ್ಷ್ಮೀ ಹರಿಹರೇಶ್ವರ ಅವರ ಪ್ರವಾಸಕಥನವಾಗಿದೆ. ನಾನು ಜೀವನದುದ್ದಕ್ಕೂ ಪಯಣಿಸಿದ್ದೇನೆ. ಚಿಕ್ಕಂದಿನಿಂದ ಹಿಡಿದು ಇಂದಿನವರೆಗೂ ಪ್ರಯಾಣಿಸುತ್ತಲೇ ಇದ್ದೇನೆ. ನನ್ನ ತಾಯಿ ನನಗೆ ಯಾವಾಗಲೂ “ನಿನ್ನ ಕಾಲಿನಲ್ಲಿ ಚಕ್ರವಿದೆ ಮಗಳೇ, ನೀನು ಒಂದು ಕಡೆ ಸ್ಥಿರವಾಗಿ ನಿಲ್ಲುವವಳಲ್ಲ” ಎಂದು ತಮಾಷೆ ಮಾಡುತ್ತಿದ್ದರು. ನನ್ನ ಬದುಕೇ ಒಂದು ಸುಂದರ ಪಯಣ. ಕೆಲವೊಮ್ಮೆ ಗೊತ್ತಾದ ಪಯಣ: ಮತ್ತೆ ಕೆಲವೊಮ್ಮೆ ಅದು ಕರೆದುಕೊಂಡು ಹೋದಲ್ಲಿಗೆ ಪಯಣ. ಆ ಊರಿನ, ನೀರಿನ, ಅನ್ನದ ಋಣ ತೀರಿದ ತಕ್ಷಣ ಒಂದು ನಿಮಿಷವೂ ಅಲ್ಲಿರಲು ಬಿಡದೇ ಮತ್ತೆಲ್ಲಿಗೋ ಪಯಣ. ಅಲ್ಲದೆ ನಮ್ಮನ್ನು ಕರೆದೊಯ್ಯದೆ ಹಲವು ಕೆರೆಗಳ ನೀರು ಕುಡಿದ ಅನುಭವವಾಗಿದೆ. ಜ್ಞಾನಾರ್ಜನೆಗಾಗಿ ಕೆಲವು ಪಯಣ, ಧನಾರ್ಜನೆಗಾಗಿ ಮತ್ತೊಂದು ಪಯಣ, ಮಕ್ಕಳಿಗಾಗಿ ಮಗದೊಂದು ಪಯಣ ಹೀಗೆ ಪಯಣದ ಬದುಕು ಹಲವಾರು ಅನುಭವದಿಂದ ಕೂಡಿದೆ. 'ಯಾತ್ರಿ'ಯಲ್ಲಿ ಹಲವಾರು ಘಟನೆಗಳು ಬಿಟ್ಟುಹೋಗಿರಬಹುದು ಅಥವಾ ಸ್ಮರಿಸಲೂ ಮರೆತಿರಬಹುದು. ನನ್ನ ಆರೋಗ್ಯದಲ್ಲಿ ಏರುಪೇರು ಆಗಿರುವ ಕಾರಣದಿಂದ ನನಗೆ ಮರೆವು ಹೆಚ್ಚಾಗಿದೆ. ಕಣ್ಣು ಮತ್ತು ಕಿವಿಗಳು ಅಷ್ಟಾಗಿ ಕೆಲಸ ಮಾಡುತ್ತಿಲ್ಲ. ಕಾರಣಗಳು ನೂರಾರು ಆದರೂ ಅದೆಲ್ಲ ಈಗ ಇಲ್ಲಿ ಮುಖ್ಯವಲ್ಲ.

About the Author

ನಾಗಲಕ್ಷ್ಮಿ ಹರಿಹರೇಶ್ವರ
(20 May 1946)

ಕವಯತ್ರಿ ನಾಗಲಕ್ಷ್ಮಿ ಹರಿಹರೇಶ್ವರ ಅವರು 1946 ಮೇ 20 ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ನಾಟಕ ಕರ್ತೃ, ನಿರ್ದೇಶಕಿ ಮತ್ತು ನಟಿ, ಆಕಾಶವಾಣಿ ಕಲಾವಿದೆ, ನಾಟಕಶಾಸ್ತ್ರ ಅಧ್ಯಾಪಕಿ. “ಕಿಶೋರಿ” ಅವರ ಮೊದಲ ಕವನ ಸಂಕಲನ. `ಭಾನುಮತಿ' ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ಲಲಿತ ಪ್ರಬಂಧಗಳಾದ ’ಚಿಂತನೆಯ ಅಲೆಗಳು', ಆಕಾಶವಾಣಿ ಚಿಂತನಾ ಕಾರ್ಯಕ್ರಮದಲ್ಲಿ ಪ್ರಸಾರಿತ. ಕನ್ನಡದ ಕೆಲಸಕ್ಕಾಗಿ ಅಮೆರಿಕಾದಲ್ಲಿನ ವಿವಿಧ ರಾಜ್ಯಗಳ ಕನ್ನಡ ಸಂಘಗಳಿಂದ ಸನ್ಮಾನ. ಅಮೆರಿಕಾದ ಹಲವಾರು ಕನ್ನಡಪರ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು, ಭಾರತದಲ್ಲಿ ಮೈಸೂರಿನ ಹೊಯ್ಸಳ ಕನ್ನಡ ಸಂಘ, ಸರ್ವಜ್ಞ ಕನ್ನಡ ಸಂಘ, ...

READ MORE

Related Books