ಬಸವೇಶ್ವರ ಮತ್ತು ಅವನ ಕಾಲ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 379

₹ 400.00




Year of Publication: 2017
Published by: ಡಾ ಎಂ ಎಂ ಕಲಬುರಗಿ ಅದ್ಯಯನಬಸಂಸ್ಥೆ
Phone: 9886407011

Synopsys

ಬಸವೇಶ್ವರ ಮತ್ತು ಅವನಕಾಲ ಡಾ ದೇಸಾಯಿ ಅವರು ತಮ್ಮ ಸಮಸ್ತ ವಿದ್ವತ್ತು ಮತ್ತು ಸಂಶೋದನ ಪ್ರತಿಬೆಯನ್ನು ಸಂಗಮಿಸಿ ರಚಿಸಿದ ಮಹಕೃತಿ,ಬಾರತೀಯ ದಾರ್ಮಿಕ ಮತ್ತು ಸಮಾಜಿಕ ಉತ್ಕ್ರಾಂತಿಗೆ ವಿಶಿಷ್ಟ ಕಾಣಿಕೆ ನೀಡಿದ ಲೋಕೋತ್ತರ ವೆಕ್ತಿತ್ವದ ಬಸವೇಶ್ವರನ ಜೀವನ ಹಾಗೂ ಚಿಂತನೆಯ ಅದಿಕೃತ ವಿವರಗಳನ್ನು ಅವರು ಶೋದಿಸಿ,ಸಂಕಲಿಸಿ,ವಶ್ಲೇಷಿಸಿ ನಮೂದಿಸಿದ್ದಾರೆ.ಇತಿಹಾಸ ಶಾಸನಗಳ ಜೊತೆಗೆ ಬಸವವಾಗ್ಮಿಯವನ್ನು ಕುರಿತು ವಿವಿದ ಭಾಷೆಗಳಲ್ಲಿ ಉಪಲಬ್ದವಿದ್ದ ತತ್ಕಾಲೀನ ಸಮಗ್ರ ಸಾಹಿತ್ಯ ವನ್ನು, ಬಸವೇಶ್ವರ ಮತ್ತು ಅವನ ಸಮಕಾಲೀನ ಶರಣರ ವಚನಗಳನ್ನು ಗಂಬೀರ ಅದ್ಯಯನಕ್ಕೆ ಒಳಪಡಿಸಿ ಚಿತ್ರಿಸಿದ ವಿನೂತನ ಬಗೆಯ ಬಸವಚರಿತ್ರೆ ಇದು. ಪ್ರಖರ ಬುದ್ದಿಮತ್ತೆಯ ,ಕ್ರಾಂತಿಕಾರಕ ವಿಚಾರಗಳ,ನಡೆ ನುಡಿಗಳನ್ನು ಅಬಿನ್ನಗೊಳಿಸಿದ ಕಾಯಕಜೀವಿ,ನ್ಯಾಯನಿಷ್ಟುರಿ ,ವಿನೂತನ ಮಾನವದರ್ಮ ಪ್ರತಿಪಾದಕ,ಅನುಬಾವಿ,ಸಂತ ಬಸವಣ್ಣನ ಜನನ ಕಾಲದಿಂರ ಅವನ ಶಿವೈಕ್ಯದ ವರೆಗೆ ಅಪೂರ್ವ ದಾಖಲೆಗಳು ಇಲ್ಲಿವೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books