
‘ಕಾಡು ತೋಟ’ ಶಿವಾನಂದ ಕಳವೆ ಅವರ ಕೃತಿ. ಮಾರುಕಟ್ಟೆಯಿಂದ ತರಕಾರಿ, ದಿನಸಿ, ಹಣ್ಣುಹಂಪಲು ಖರೀದಿಸಿ ತರುವುದು ಕಷ್ಟವಾಗಿ ಕೊರೊನಾ ಲಾಕ್ ಡೌನ್ ಹಲವು ಸವಾಲು ಒಡ್ಡಿದ್ದು ನೆನಪಿದೆ. ಕೈಯಲ್ಲಿ ಹಣವಿಲ್ಲದಿದ್ದರೂ ಹೊರಗಡೆ ಹೋಗಲಾಗದ ಪರಿಸ್ಥಿತಿ ಅನುಭವಿಸಿದ್ದೇವೆ. ಅಡಿಕೆ ಉಣ್ಣಲಾಗದು, ರಬ್ಬರ್ ತಿನ್ನಲಾಗದೆಂದು ಏಕಜಾತಿಯ ವಾಣಿಜ್ಯ ತೋಟ ಮಾಡಿದವರಿಗೆಲ್ಲ ಬೆಳೆ ಭವಿಷ್ಯದ ಬಗ್ಗೆ ಯೋಚಿಸುವಂತಾಯ್ತು. ನಮ್ಮದೇ ತೋಟದಲ್ಲಿ ಆಹಾರ ಬೆಳೆ, ಔಷಧ, ಹೂವು, ಸೊಪ್ಪು, ತರಕಾರಿ ಬೆಳೆದಿದ್ದರೆ ಆಹಾರ-ಆರೋಗ್ಯ ಸುಸ್ಥಿರತೆ ಸಾಧ್ಯವೆಂದು ಮನದಟ್ಟಾಯ್ತು ಎನ್ನುತ್ತಾರೆ ಎಂ.ಎ. ಸುಬ್ರಹ್ಮಣ್ಯ. ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು ಕಾಡು ತೋಟ- ಆರೋಗ್ಯ ಭಾಗ್ಯದ ಅನ್ನದ ತಟ್ಟೆ ರಚಿಸಿದ ಲೇಖಕರು ಈ ಸಂಕಷ್ಟದ ಸಮಯದಲ್ಲೂ ನೆಮ್ಮದಿಯಿಂದ ಇದ್ದಾರೆ ಎಂಬುದನ್ನು ವಿವರಿಸಿದ್ದಾರೆ.
©2025 Book Brahma Private Limited.