ಗಣೇಶನ ಪೂಜೆಯ 21 ಪತ್ರೆಗಳು ಮತ್ತು ಆರೋಗ್ಯ

Author : ವಸುಂಧರಾ ಭೂಪತಿ

Pages 124

₹ 90.00




Year of Publication: 2020
Published by: ವಸಂತ ಪ್ರಕಾಶನ
Address: ನಂ. 360, 10ನೇ ಬಿ ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು- 560011
Phone: 080-22443996

Synopsys

‘ಗಣೇಶನ ಪೂಜೆಯ 21 ಪತ್ರಿಗಳು ಮತ್ತು ಆರೋಗ್ಯ’ ವಸಂತ ಪ್ರಕಾಶನದ ಆರೋಗ್ಯ ಚಿಂತನ ಮಾಲಿಕೆಯಲ್ಲಿ ಪ್ರಕಟಿತ ಕೃತಿ. ಲೇಖಕಿ ಡಾ. ವಸುಂಧರಾ ಭೂಪತಿ ಸಂಪಾದಕರು. ಗಣೇಶನ ಪೂಜೆಯಿಲ್ಲದ ಯಾವ ಶುಭಕಾರ್ಯವೂ ಇಲ್ಲ. ಯಾವುದೇ ಕೆಲಸವಿದ್ದರೂ ಗಣೇಶನನ್ನು ಪೂಜಿಸಿಯೇ ಮುಂದಿನ ಕಾರ್ಯಕ್ಕೆ ಅನುವಾಗುವುದು ನಮ್ಮ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದೆ ಎನ್ನುತ್ತಾರೆ ಲೇಖಕಿ ವಸುಂಧರಾ ಭೂಪತಿ. ಸಾಮಾನ್ಯವಾಗಿ ಬಿಲ್ವಪತ್ರೆ, ಗರಿಕೆ, ಎಕ್ಕ, ಉತ್ತರಾಣಿ, ತುಳಸಿಪತ್ರೆಗಳಿಂದ ಅರ್ಚಿಸುವ ವಿಷಯ ಗೊತ್ತಿದೆಯಾದರೂ ಆ 21 ಪತ್ರೆಗಳು ಯಾವುವು, ಅವುಗಳಲ್ಲಿ ವಿಶೇಷತೆಗಳು ಮಾತ್ರವಲ್ಲದೆ ಮುಖ್ಯವಾಗಿ ಅವುಗಳಲ್ಲಿ ಅಡಗಿರುವ ಔಷಧೀಯ ಗುಣಗಳ ಬಗ್ಗೆ ಬಹುತೇಕರಿಗೆ ಅರಿವಿರಲಾರದು. ಗಣೇಶನ ಪೂಜೆಯ 21 ಪತ್ರೆಗಳಲ್ಲಿ ಒಂದಕ್ಕಿಂತ ಒಂದು ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿದ್ದು, ನಮ್ಮ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಆಶ್ಚರ್ಯವೆಂದರೆ, ಈ 21 ಪತ್ರೆಗಳಲ್ಲಿ ಹುಲ್ಲು, ಚಿಕ್ಕಗಿಡಗಳು, ಬೃಹತ್ ಮರಗಳು, ಸೊಪ್ಪುಗಳು, ಹೂವುಗಳು, ಮುಳ್ಳುಗಳಿಂದಾವೃತ್ತವಾದ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಒಟ್ಟಿನಲ್ಲಿ, ಎಲ್ಲವೂ ದೇವರಿಗೆ ಅಂದರೇ ಗಣೇಶನಿಗೆ ಪ್ರಿಯವಾದವುಗಳು. ಗಣೇಶನಿಗೆ ಪ್ರಿಯವಾದವುಗಳು ನಮಗೂ ಪ್ರಿಯವಾದವುಗಳಾಗುತ್ತವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕಾಯಿಲೆ ಬಾರದಂತೆ ತಡೆಗಟ್ಟಲು, ಕಾಯಿಲೆ ಬಂದನಂತರ ಪರಿಹರಿಸಿಕೊಳ್ಳಲು, ಈ 21 ಪತ್ರೆಗಳು ಸಹಾಯಕವಾಗುತ್ತವೆ. ಇದನ್ನು ತಿಳಿಯಪಡಿಸುವುದೇ ಈ ಪುಸ್ತಕದ ಉದ್ದೇಶ ಎನ್ನುತ್ತಾರೆ ಲೇಖಕಿ ವಸುಂಧರಾ ಭೂಪತಿ.

 

About the Author

ವಸುಂಧರಾ ಭೂಪತಿ
(05 June 1962)

ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ,  ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.  ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...

READ MORE

Related Books