ವನೌಷಧಿಗಳ ಗುಣಧರ್ಮ ಮತ್ತು ವಿವಿಧ ಶಬ್ಧಕೋಶ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 164

₹ 310.00




Year of Publication: 2017
Published by: ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531

Synopsys

‘ವನೌಷಧಿಗಳ ಗುಣಧರ್ಮ ಮತ್ತು ವಿವಿಧ ಶಬ್ಧಕೋಶ’ ಕೃತಿಯು ತಿರುಕ ಅವರ ಬಾಳ ಬೆಳಕು ಸಾಹಿತ್ಯ ಮಾಲೆ-53ರ ಅಡಿಯಲ್ಲಿ ಪ್ರಕಟವಾದ ಮನೆಔಷಧಿಗಳನ್ನು ಒಳಗೊಂಡ ಸಂಕಲನವಾಗಿದೆ. ಇಲ್ಲಿ ನೈಸರ್ಗಿಕವಾಗಿ ಸಿಗಬಹುದಾದ, ಮನೆ ಹಿತ್ತಲಿನಲ್ಲಿರುವ ಹಲವಾರು ಮನೆ ಔಷಧಿಗಳ ಕುರಿತ ಮಾಹಿತಿಯನ್ನು ನೀಡಲಾಗಿದೆ. ಅಳಲೇಕಾಯಿ: ಇದು ಮೃದುವಿರೇಚನಕಾರಿ; ಬಾವು ಶೋಭೆಗಳನ್ನು ಹರಿಸುತ್ತದೆ. ಕಫಘ್ನವೂ ಹೌದು. ಪಿತ್ತವನ್ನು ನಿವಾರಿಸಿ, ಚರ್ಮರೋಗಗಳನ್ನು ಪರಿಹರಿಸಿ ಅಗ್ನಿದೀಪವನ್ನುಂಟುಮಾಡುತ್ತದೆ. ರಸಾದಿ ಧಾತುಗಳನ್ನು ವೃದ್ಧಿಪಡಿಸುವ ಶಕ್ತಿ ಇದಕ್ಕಿರುವುದರಿಂದ ವನೌಷಧಿಗಳಲ್ಲಿ ಇದಕ್ಕೆ ಶ್ರೇಷ್ಠ ಸ್ಥಾನವಿದೆ. ಇದರಲ್ಲಿ ಬಾಲಹರೀತಕೀ ಎಂಬ ಇನ್ನೊಂದು ಜಾತಿಯೂ ಇದೆ. ಇದರ ಹೆಚ್ಚಿನ ಗುಣಧರ್ಮಗಳು ಅದೇ ಆದರೂ ಮೂಲವ್ಯಾಧಿ: ಗುಲ್ಬಗಳೇ ಮೊದಲಾದ ಕೆಲವೊಂದು ವ್ಯಾಧಿಗಳ ಮೇಲೆ ಇದು ಹೆಚ್ಚಿನ ಪರಿಣಾಮವನ್ನುಂಟುಮಾಡುತ್ತದೆ. ಇದನ್ನು ಚೂರ್ಣ ರೂಪವಾಗಿಯೂ, ಕಷಾಯರೂಪವಾಗಿಯೂ ಉಪಯೋಗಿಸುವ ರೂಢಿಯಿದೆ. ಚೂರ್ಣವನ್ನು ಹೊತ್ತಿಗೆ ಕಾಲುತೊಲೆಯಿಂದ ಅರ್ಧತೊಲೆಯವರೆಗೆ ಕೊಡುವುದು ಸಾಮಾನ್ಯ ನಿಯಮ; ಅನುಪಾನಕ್ಕೆ ಜೇನು ಅಥವಾ ಬಿಸಿನೀರು ಕಷಾಯವಾದರೆ 2 ರಿಂದ 4 ಚಮಚೆಯವರೆಗೆ ಕೊಡಬೇಕು. ಅತಿಬಜೆ: ಇದು ದೀಪನಕಾರಿ, ಜ್ವರಘ್ನ ಮತ್ತು ಗ್ರಾಹಿ: ಅಜೀರ್ಣವನ್ನು ಪರಿಹರಿಸಿ ಹಸಿವೆಯನ್ನು ಹೆಚ್ಚಿಸುತ್ತದೆ. ಕಟುಪೌಷ್ಟಿಕವಾಗಿರುವುದರಿಂದ ಅತಿಸಾರ, ಸಂಗ್ರಹಣೆಗಳನ್ನು ಗುಣಪಡಿಸುತ್ತದೆ. ಚಿಕ್ಕಮಕ್ಕಳ ಮತ್ತು ಬಾಣಂತಿಯರ ಭೇದಿಗಳಲ್ಲಿ ಬಹು ಒಳ್ಳೆಯ ಪರಿಣಾಮವನ್ನುಂಟುಮಾಡುತ್ತದೆ. ಹೀಗೆ ಹಲವಾರು ಬಗೆಯ ಔಷಧಿಯ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books