ಶ್ರವಣ ದೋಷಗಳು, ಕಾರಣ ಮತ್ತು ಪರಿಹಾರಗಳು

Author : ರಾಜಶೇಖರ ಕುಕ್ಕುಂದಾ

Pages 40

₹ 0.00




Year of Publication: 2021
Published by: ಪ್ರಸಾರಾಂಗ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
Address: ಪ್ರಸಾರಾಂಗ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ - 590 018
Phone: 9986590894

Synopsys

ನಮ್ಮ ಕಿವಿ ವಿಷಯಾತುರ. ಅದು ಯಾವಾಗಲೂ ಸುತ್ತಮುತ್ತಲಿನ ಶಬ್ದವನ್ನು ಕೇಳಿಸಿಕೊಳ್ಳುವುದರಲ್ಲಿಯೇ ತಲ್ಲಿನವಾಗಿರುತ್ತದೆ. ನಮ್ಮ ಕಣ್ಣು ವಿಶ್ರಾಂತಿ ಪಡೆಯಬಹುದು; ಆದರೆ ಕಿವಿ ಹಾಗಲ್ಲ. ಅದು ಸದಾ ಕಾರ್ಯಶೀಲ. ಏನೆಲ್ಲಾ ಯಾವಾಗಲೂ ಕೇಳಿಸಿಕೊಳ್ಳುವ ನಮ್ಮ ಕಿವಿಗೆ 'ಶಬ್ದ' ಎಂದರೇನು, ಅದು ಹೇಗೆ ಕೇಳಿಸುತ್ತದೆ, ತನಗೊದಗಿದ ತೊಂದರೆ ಏನು, ಕಾರಣಗಳೇನು, ಪರಿಹಾರಗಳೇನು-ಎಂಬೆಲ್ಲ ಮಾತುಗಳನ್ನು ಕೇಳಿಸುವುದು ಬೇಡವೆ? ಇದು ಈ ಪುಸ್ತಕದ ಆಶಯವಾಗಿದೆ. ಶ್ರವಣ ಸಾಧನಗಳ ಅಭಿವೃದ್ಧಿಯಲ್ಲಿ ಎಂಜಿನಿಯರುಗಳ ಪಾತ್ರವೂ ಅಡಗಿದೆ. ಸಂಶೋಧನೆಯಲ್ಲಿ ತೊಡಗಿಕೊಂಡಾಗ ಮೂಲಭೂತ ವಿಷಯಗಳು ತಿಳಿದಿರಬೇಕಾಗುತ್ತದೆ. ಅದರ ಫಲವಾಗಿ ಬೆಳಕು ಕಂಡದ್ದೇ ಈ ಕಿರು ಪುಸ್ತಕ. ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದ ಡಾ. ಶ್ರೀಧರ ಎಸ್. ಕುಂಟೋಜಿ ಮತ್ತು ಪ್ರೊ. ರಾಜಶೇಖರ ಅಲ್ಲೂರಕರ್ ( ಕುಕ್ಕುಂದಾ) ಅವರ ಈ ಪುಸ್ತಕವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆಯಲ್ಲಿ ಪ್ರಕಟವಾಗಿದೆ. ವಿಶೇಷ ಚೇತನರಿಗೆ ಈ ಪುಸ್ತಕ ಒಂದು ಉತ್ತಮ ಕೊಡುಗೆಯಾಗಬಹುದು.

About the Author

ರಾಜಶೇಖರ ಕುಕ್ಕುಂದಾ

‘ರಾಜಶೇಖರ ಕುಕ್ಕುಂದಾ’ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನಲ್ಲಿ ಸಂಯೋಜಿತ ಪ್ರಾಧ್ಯಾಪಕರು. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.  ಕೃತಿಗಳು:  ಚೆಲುವ ಚಂದಿರ,  ಗೋಲಗುಮ್ಮಟ, ಮತ್ತು ಪುಟಾಣಿ ಪ್ರಾಸಗಳು (ಮಕ್ಕಳ ಕವನ ಸಂಕಲನಗಳು), ತಾಂತ್ರಿಕ ವಿಷಯಗಳ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕವಿತೆಗಳು ಸಿ. ಬಿ. ಎಸ್. ಇ. ಕನ್ನಡ ಭಾಷೆಯ ಪಠ್ಯದಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ಮತ್ತು ಶಿಶುಗೀತೆಯ ಅಲ್ಬಂಗಳಲ್ಲಿ ಸೇರಿವೆ. ಕವಿತೆಗಳು ಮತ್ತು ಲೇಖನಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ; ಆಕಾಶವಾಣಿಯಲ್ಲಿ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ...

READ MORE

Related Books