
ಡಾ. ಎಸ್.ಜೆ.ನಾಗಲೋಟಿಮಠ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಹೆಸರಾಂತ ವೈದ್ಯರು. ಜನಸಾಮಾನ್ಯರೊಂದಿಗೆ ಸಹಜವಾಗೇ ಬೆರೆಯುವ ಗುಣ ಇದ್ದರಿಂದ ಅವರು ಶ್ರೀ ಸಾಮಾನ್ಯನನ್ನು ಹಾಗೂ ಶ್ರೀ ಸಾಮಾನ್ಯ ರೋಗಿಗಳ ನಡೆ-ನುಡಿ-ವರ್ತನೆಗಳು ಸರಿಯಾಗೇ ಗುರುತಿಸುತ್ತಿದ್ದರು. ಕೆಲವೊಮ್ಮೆ ವೈದ್ಯರ ಊಹೆಗೂ ನಿಲುಕದಷ್ಟು ಗ್ರಾಮೀಣ ಮದ್ದುಗಳ ಬಗ್ಗೆ ಅವರಿಗೆ ಮಾಹಿತಿ ಸಿಗುತ್ತಿತ್ತು. ರೋಗಿಗಳಿಂದಲೂ ಅವರು ಕಲಿತಿದ್ದು ಬಹಳ ಹಾಗೂ ವೈದ್ಯರು ಕಲಿಯಬೇಕು ಎಂಬುದೂ ಅವರ ಆಶಯವಾಗಿತ್ತು. ಇಂತಹ ಸರಳ ಸಂಗತಿಗಳು ತಮ್ಮ ಅನುಭವದ ಮೂಲಕ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1998) ಹಾಗೂ ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’( 1998) ಲಭಿಸಿದೆ.
©2025 Book Brahma Private Limited.