ಅಲ್ಲಮನ ವಚನಗಳು (ಎಲ್. ಬಸವರಾಜು)

Author : ಎಲ್. ಬಸವರಾಜು

Pages 125

₹ 113.00




Year of Publication: 2016
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಸಂಶೋಧಕ ಡಾ. ಎಲ್. ಬಸವರಾಜು ಅವರು ಬರೆದ ಕೃತಿ-ಅಲ್ಲಮನ ವಚನಗಳು. 12ನೇ ಶತಮಾನದ ಶರಣರ ಅನುಭಾವ ಮಂಟಪಕ್ಕೆ ಅಲ್ಲಮಪ್ರಭುಗಳೇ ಅಧ್ಯಕ್ಷರು. ಅವರ ವಿದ್ವತ್ತಿಗೆ ಗೌರವ ನೀಡಿ ಬಸವಣ್ಣನವರು ಅನುಭವ ಮಂಟಪದ ಅಧ್ಯಕ್ಷರನ್ನಾಗಿಸಿದ್ದರು. ಅವರದು ಬೆಡಗಿನಿಂದ ಕೂಡಿದ ವಚನಗಳು, ಸರಳ-ಸುಲಭದ ತುತ್ತಲ್ಲ. ಅಂತಹ ಅಲ್ಲಮನ ವಚನಗಳನ್ನು ಸಂಪಾದಿಸಿ, ವಿವರಣೆ ಸಹಿತ ಬರೆದ ಕೃತಿ ಇದು. ಅಲ್ಲಮನ ವಚನಗಳ ವೈಶಿಷ್ಟ್ಯ-ಹಿರಿಮೆ-ಬೆಡಗುಗಳ ಸ್ವರೂಪ ಅವುಗಳ ವಿಶ್ಲೇಷಣೆಯ ವಿವರಣೆಗಳು ಈ ಕೃತಿಯಲ್ಲಿವೆ.

 

About the Author

ಎಲ್. ಬಸವರಾಜು
(07 October 1919 - 29 January 2012)

ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪ- ತಾಯಿ ಈರಮ್ಮ. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ...

READ MORE

Related Books