ವಚನ ಸಂಪದ

Author : ಸಿ.ಕೆ ನಾವಲಗಿ

Pages 112

₹ 90.00




Year of Publication: 2012
Published by: ಕನ್ನಡ ವಚನ ಸಾಹಿತ್ಯ ಪುಸ್ತಕ ಮಾಲೆ
Address: ಶೂನ್ಯ ಸಂಪಾದನಮಠ, ಗುರುವರ್‌ ಪೇಟೆ, ಗೋಕಾಕ್

Synopsys

ವಚನ ಸಾಹಿತ್ಯದ ಕುರಿತು ವಿವಿಧ ಲೇಖಕರು ಬರೆದ ಲೇಖನಗಳ ಸಂಕಲನ ‘ವಚನ ಸಂಪದ’. ಸಿ.ಕೆ. ನಾವಲಗಿ ಸಂಪಾದಕರು. ರಾಜೇಶ್ವರಿ ಮಹೇಶ್ವರಯ್ಯ ಅವರ ಶಿವಶರಣೆಯರು ಪ್ರತಿಪಾದಿಸಿದ ಮೌಲ್ಯಗಳ ಪ್ರಸ್ತುತತೆ, ಗುರುಪಾದ ಮರಿಗುದ್ದಿ ಅವರ ಬಸವಯುಗದ ವಚನಕಾರರು, ವ್ಹಿ.ಎಸ್. ಮಾಳಿ ಅವರ ವಚನ ಸಂಸ್ಕೃತಿ: ಬೆಡಗಿನ ವಚನಗಳು, ಅಶೋಕ ನರೋಡೆ ಅವರ ಶಿವಶರಣೆಯ ಕಾಯಕ: ಸಂಗ್ರಹ ನಿಷೇಧ, ವೈ.ಎಂ ಯಾಕೊಳ್ಳಿ ಅವರ ವಚನ ಸಾಹಿತ್ಯದಲ್ಲಿ ಕೃಷಿ ಲೇಖನಗಳಿವೆ. ಹಾಗೆಯೇ, ಸಿ.ಕೆ. ನಾವಲಗಿ ಅವ ಶರಣರ-ದಾಸರ ಆತ್ಮಚಿಂತನೆಯ ಪ್ರಸ್ತುತತೆ, ಎಸ್.ಎಂ. ಗಂಗಾಧರಯ್ಯ ಅವರ ಅಲ್ಲಮ ಕೂಗಿದ ಕೂಗು, ಬಸವರಾಜ ಜಗಜಂಪಿ ಅವರ ಆಧುನಿಕ ವಚನಕಾರ ಸಿದ್ಧಯ್ಯ ಪುರಾಣಿಕ, ಕೆ.ಎನ್. ದೊಡಮನಿ ಅವರ ವಚನ ಸಾಹಿತ್ಯದಲ್ಲಿ ವೈಚಾರಿಕಪ್ರಜ್ಞೆ, ಜಿ.ಕೆ. ಹಿರೇಮಠ ಅವರ ಶಿವಶರಣೆಯ ಒಲವು-ನಿಲುವು, ಗುರುದೇವಿ ಹುಲೆಪ್ಪನವರಮಠ ಅವರ ಶರಣರ ದೃಷ್ಟಿಯಲ್ಲಿ ಪೂಜೆ, ಹಾಗೂ ಈಶ್ವರಚಂದ್ರ ಬೆಟಗೇರಿ ಅವರ ಶಿವಶರಣರ ವಚನಗಳಲ್ಲಿ ಮನೋವಿಜ್ಞಾನ ಈ ರೀತಿಯ ಲೇಖನಗಳಿವೆ.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books