ಶರಣರ ಸಮಗ್ರ ಕ್ರಾಂತಿ

Author : ರಂಜಾನ್ ದರ್ಗಾ

Pages 220

₹ 90.00




Year of Publication: 2015
Published by: ಲೋಹಿಯಾ ಪ್ರಕಾಶನ
Address: ಕಪ್ಪಗಲ್ಲು ರಸ್ತೆ, ಬಳ್ಳಾರಿ

Synopsys

ಪತ್ರಕರ್ತ -ಲೇಖಕ ರಂಜಾನ್ ದರ್ಗಾ ಅವರ ಚಿಂತನಾತ್ಮಕ ಬರಹಗಳ ಕೃತಿ-ಶರಣರ ಸಮಗ್ರ ಕ್ರಾಂತಿ. 12ನೇ ಶತಮಾನದ ಶರಣರ ಚಳವಳಿಯು ಒಂದು ನಿರ್ದಿಷ್ಟ ದಿಕ್ಕನ್ನು, ಉದ್ದೇಶವನ್ನು ಹೊಂದಿದೆ. ಅದು ಪುರೋಹಿತಶಾಹಿಯಿಂದಾಗುವ ಎಲ್ಲ ಬಗೆಯ ಶೋಷಣೆಗಳ ವಿರುದ್ಧವಾಗಿತ್ತು. ಇಂತಹ ಚಿಂತನೆಗ ವ್ಯಾಪ್ತಿಗೆ ತಳ ಸಮುದಾಯವನ್ನು ಎಳೆದು ತರುವುದು ಅವರ ಉದ್ದೇಶವಾಗಿತ್ತು. ಈ ರೀತಿಯ ನಡೆಯು ಶರಣರ ಸಮಗ್ರ ಕ್ರಾಂತಿಯ ಮೂಲ ಚೇತನವೂ ಆಗಿತ್ತು. ಆದ್ದರಿಂದ, ಧರ್ಮ, ದೇವರು ವಿಷಯದಲ್ಲಿ ಶೋಷಿಸುವ ಎಲ್ಲ ಆಚರಣೆಗಳ ವಿರುದ್ಧ ಬಂಡೆದ್ದರು. ಸರ್ವಜನತೆಯ ಸಮಾನತೆಯೇ ಈ ಕ್ರಾಂತಿಯ ಉದ್ದೇಶವಾಗಿತ್ತು. ಇಂತಹ ಚಿಂತನೆಗಳ ಬರಹಗಳು ಒಳಗೊಂಡ ಕೃತಿ ಇದು.

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ...

READ MORE

Related Books