ಮಾನವತಾವಾದಿ ಬಸವಣ್ಣ

Author : ಚಂದ್ರಶೇಖರ ವಸ್ತ್ರದ

₹ 80.00




Year of Publication: 2022
Published by: ಲಡಾಯಿ ಪ್ರಕಾಶನ
Phone: 9480286844

Synopsys

ಲೇಖಕ ಚಂದ್ರಶೇಖರ ವಸ್ತ್ರದ ಅವರ ಧಾರ್ಮಿಕ ಕೃತಿ ʻಮಾನವತಾವಾದಿ ಬಸವಣ್ಣʼ. ಪುಸ್ತಕವು ತತ್ವಜ್ಞಾನಿ ಹಾಗೂ ಸಾಮಾಜಿಕ ಚಿಂತಕ ಸುಧಾರಕರಾಗಿರುವ ಬಸವಣ್ಣನ ಕುರಿತ ವಿಚಾರಗಳನ್ನು ಹೇಳುತ್ತದೆ. ಹನ್ನೆರಡನೇ ಶತಮಾನದಲ್ಲಿ ನಡೆದಿರುವ ವಚನಕಾರರ ಚಳವಳಿಯ ಸಮಯದಲ್ಲಿ ಜನಿಸಿದ ಇವರು ಲಿಂಗಾಯತ ಧರ್ಮ ಸ್ಥಾಪಿಸುವುದರ ಜೊತೆಗೆ ಜಾತಿಯತೆ, ಅಸಮಾನತೆ, ಲಿಂಗ ಬೇಧ ತಾರತಮ್ಯ, ಸಾಮಾಜಿಕ ಅನ್ಯಾಯ ಸಮಾಜದ ಕೆಟ್ಟ ಮುಖಗಳ ವಿರುದ್ದ ದನಿ ಎತ್ತಿ ಉತ್ತಮ ಸಮಾಜ ನಿರ್ಮಿಸಲು ಎಲ್ಲರನ್ನೂ ಒಗ್ಗೂಡಿಸಿದವರು. ಹೀಗೆ ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲಿದ ಬಸವಣ್ಣನವರು ‘ಮಾನವತಾವಾದಿ’ಯಾಗಿ ಕಾಣುವ ಕರಿತು ಲೇಖಕರು ಇಲ್ಲಿ ಬರೆಯುತ್ತಾರೆ. ವಚನ ಚಳವಳಿಯ ಮೇಲೆ ವಿಶೇಷ ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ.

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books