ಬಸವಣ್ಣನ ಪಂಚಪರುಷ

Author : ಚನ್ನಪ್ಪ ಎರೇಸೀಮೆ

Pages 82

₹ 2.00




Year of Publication: 1967
Published by: ಶ್ರೀಕಂಠೇಶ್ವರ ಪ್ರೆಸ್ ಮತ್ತು ಬುಕ್ ಡಿಪೋ
Address: ಮಹಾತ್ಮಗಾಂಧಿ ರಸ್ತೆ, ತುಮಕೂರು

Synopsys

ಪಂಡಿತ ಚನ್ನಪ್ಪ ಎರೇಸೀಮೆ ಅವರು ಬರೆದ ಕೃತಿ-ಬಸವಣ್ಣನ ಪಂಚಪರುಷ. 1951ರಲ್ಲಿ ಶ್ರೀ ಗೌರಿಶಂಕರ ಸ್ವಾಮಿಗಳು ತುಮಕೂರಿನ ವೀರಭದ್ರ ದೇವಾಲಯದಲ್ಲಿ ಸಿಂಗಿರಾಜನ ಬಸವ ಪುರಾಣದಲ್ಲಿ ಬರುವ ಒಂದು ಪವಾಡದ ಬಗ್ಗೆ ಉಪನ್ಯಾಸ ನೀಡುತ್ತಿದ್ದು, ಅದು ತುಂಬಾ ಕುತೂಹಲವೆನಿಸಿದ್ದರಿಂದ, ಅದೇ ಜಾಡು ಹಿಡಿದು ತಾವು ‘ಬಸವಣ್ಣನ ಪಂಚಪರುಷ’ ಕೃತಿ ಬರೆದಿದ್ದಾಗಿ ಲೇಖಕರು ಹೇಳಿಕೊಂಡಿದ್ದಾರೆ.

ಬಸವಣ್ಣನವರು ಎಲ್ಲರಂತೆ ಈ ಭೂಮಿಯ ನಡೆದರೂ ಅವರ ಪಾದಕ್ಕೆ ಮಣ್ಣು ಹತ್ತಲಿಲ್ಲ. ಅವರ ನಡೆಯೇ ಸಾಮಾನ್ಯರಂತಿರಲಿಲ್ಲ. ಸಾಮಾನ್ಯರು ಅವರಂತೆ ಜೀವಿಸುವುದು ಕಷ್ಟವಾಗಿತ್ತು. ಶರಣಜೀವಿಗಳು ಮಾತ್ರ ಅಂತಹ ನಡೆಗೆ ಯೋಗ್ಯವಾಗಿದ್ದರು. ಅದಕ್ಕಾಗಿ ಸಾಮಾನ್ಯರು ಬಸವಣ್ಣನವರು ಪವಾಡ ಪುರುಷರು ಎಂಬಂತೆ ಬಿಂಬಿಸಿದರು. ಬಸವಣ್ಣನವರನ್ನು ವಿಶ್ವಾತೀತರೆಂದೂ ಹೊಗಳಬಹುದು. ತಲೆಯ ಮೇಲೆ ಹೊತ್ತು ಕುಣಿಯಬಹುದು. ಆದರೆ, ಅವರ ತತ್ವವನ್ನು ಜೀರ್ಣೀಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ಸಂಗತಿಯನ್ನು ಈ ಕೃತಿಯಲ್ಲಿ ತೋರಿದ್ದಾರೆ. 

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books