ಘನಮನ ಸಂಪನ್ನರು

Author : ಶಕುಂತಲಾ ಸಿದ್ಧರಾಮ ದುರಗಿ

Pages 122

₹ 110.00




Year of Publication: 2020
Published by: ಸುಂದರ ಪುಸ್ತಕ ಪ್ರಕಾಶನ
Address: 79, ಚಂದ್ರಕಿರಣ, 2ನೇ ತಿರುವು, 2ನೇ ಮುಖ್ಯರಸ್ತೆ, ಶಕ್ತಿನಗರ, ಧಾರವಾಡ-580004

Synopsys

ಡಾ.ಶಕುಂತಲಾ ಸಿ.ದುರಗಿಯವರು ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ 'ಘನಮನ ಸಂಪನ್ನರು' ಕೃತಿಯನ್ನು ರಚಿಸಿದ್ದು, ಹತ್ತು ಮೌಲಿಕ ಲೇಖನಗಳಿವೆ. 12ನೇ ಶತಮಾನದ ಶರಣರಾದ ವೀರ ಗೊಲ್ಲಾಳ, ಮೇದಾರ ಕೇತಯ್ಯ, ಶರಣೆಯರಾದ ಮುಕ್ತಾಯಕ್ಕ, ವ್ರತಾಚಾರನಿಷ್ಠೆಯ ಅಕ್ಕಮ್ಮ, ನಿಜಮುಕ್ತೆ ಹಡಪದ ಲಿಂಗಮ್ಮನ ಕುರಿತು ಅರ್ಥಪೂರ್ಣ ಚಿಂತನಾ ಲೇಖನಗಳಿವೆ. ಶರಣಸತಿ - ಲಿಂಗಪತಿ, ಯೋಗಾಂಗ ತ್ರಿವಿಧಿ, ಪ್ರಭುದೇವ-ಸಿದ್ಧರಾಮನನ್ನು ಶಿವಯೋಗದೆಡೆಗೆ ಹೊರಳಿಸಿದುದು, ವಚನಗಳು - ವಂಶವಾಹಿ (ಜೆನೆಟಿಕ್), ಶಿವಾಚಾರ, ಮುಂತಾದವುಗಳನ್ನು ವಸ್ತುವಾಗಿಸಿ, ಲೇಖನವಾಗಿಸಿದ್ದಾರೆ. ಕೃತಿಗೆ ಸಂಬಂಧಿಸಿದಂತೆ ಸಾಹಿತಿ-ಸಂಶೋಧಕ ಡಾ. ವೀರಣ್ಣ ರಾಜೂರು ಅವರು ‘ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಶರಣ ಶರಣೆಯರೆಲ್ಲ ತಮ್ಮ ಸತ್ಯಶುದ್ಧ ನಡೆ-ನುಡಿ, ಕಾಯಕ-ದಾಸೋಹಗಳಿಂದ ಉನ್ನತ ಬದುಕು ನಡೆಸಿದವರು. ಅರಿವು-ಆಚಾರ-ಅನುಭಾವಗಳಲ್ಲಿ ಅಪೂರ್ವ ಸಾಮರಸ್ಯವನ್ನು ಸಾಧಿಸಿದವರು, ಸಕಲ ಜೀವಾತ್ಮರ ಲೇಸಿಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಹೀಗಾಗಿ, ಈ ಕೃತಿಗೆ ನೀಡಿದ 'ಘನಮನ ಸಂಪನ್ನರು' ಎಂಬ ಶೀರ್ಷಿಕೆ ಅನ್ವರ್ಥಕವೆನಿಸಿದೆ. ಒಟ್ಟಾರೆ, ವಚನ ಸಾಹಿತ್ಯದ ಓದು, ಬೋಧನೆ, ಚರ್ಚೆ, ಚಿಂತನೆಗಳ ಹಿನ್ನೆಲೆಯಲ್ಲಿ ಮೂಡಿ ಬಂದ ಇಲ್ಲಿಯ ಬರಹಗಳು ಲೇಖಕಿಯ ಮಾಗಿದ ಅನುಭವದ ಅಭಿವ್ಯಕ್ತಿಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಶಕುಂತಲಾ ಸಿದ್ಧರಾಮ ದುರಗಿ
(11 April 1943)

ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ  ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು.  ಕೃತಿಗಳು-ಪ್ರಶಸ್ತಿಗಳು:  ಮಗ್ಗಲು ಮನೆ ಅತಿಥಿ ...

READ MORE

Related Books