ವಚನ ಕಾಣಿಕೆ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 93

₹ 0.00




Year of Publication: 2013
Published by: ಶಂಕರ ಪ್ರಕಾಶನ
Address: ರಾಜನಾಳ, ಕಲಬುರಗಿ ಜಿಲ್ಲೆ

Synopsys

ಕವಿ ಹಾಗೂ ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಶರಣರ ವಚನಗಳ ವಿಶ್ಲೇಷಾತ್ಮಕ ರಚಿಸಿದ ಕೃತಿ-ವಚನ ಕಾಣಿಕೆ. ಶರಣರ ಸಂಕ್ಷಿಪ್ತ ಪರಿಚಯದ ನಂತರ ಅವರ ವಿಶ್ಲೇಷಣೆ ಮಾಡುವುದು ಲೇಖಕರು ಅನುಸರಿಸಿದ ಶೈಲಿ ಕಾಣಬಹುದು.ಸಾಮಾನ್ಯರಿಗೂ ತಿಳಿಯುವಂತೆ ಭಾಷೆ ಸರಳವಾಗಿದೆ. ವಚನ ರಚನೆಯ ಹಿಂದಿನ ಉದ್ದೇಶವನ್ನು ಶರಣರ ದೃಷ್ಟಿಯಲ್ಲಿಯೇ ಸ್ಪಷ್ಟಪಡಿಸುತ್ತಾರೆ. ವಚನಕಾರರು ಪ್ರಜ್ಞಾಪೂರ್ವಕವಾಗಿ ವಚನ ರಚನೆ ಮಾಡದಿದ್ದರೂ ವ್ಯಕ್ತಿತ್ವ ವಿಕಾಸಕ್ಕಾಗಿ ಹೇಗೆ ಸಹಕಾರಿಯಾಗಬಲ್ಲವು ಎಂಬುದನ್ನು ಎಳೆಎಳೆಯಾಗಿ ಬಿಡಿಸಲು ಪ್ರಯತ್ನಿಸಿದ್ದಾರೆ. 18 ವಚನಕಾರರ 41 ವಚನಗಳನ್ನು ಆಯ್ದುಕೊಂಡಿದ್ದಾರೆ. ರಾಜನಾಳ ಗ್ರಾಮದ ಚಿದಂಬರರಾವ್ ಪಾಟೀಲ್ ಅವರ ಪುತ್ರರ ಮದುವೆ ನೆನಪಿಗಾಗಿ  ಈ ಕೃತಿಯನ್ನು ಉಚಿತವಾಗಿ ವಿತರಿಸಲಾಗಿದೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books