ಶಿವಶರಣರ ತೇಜೋವಧೆ

Author : ಲಿಂಗರಾಜ ಸೊಟ್ಟಪ್ಪನವರ

Pages 94

₹ 60.00




Year of Publication: 2014
Published by: ವಚನ ಅಧ್ಯಯನ ಕೇಂದ್ರ
Address: ನಾಗನೂರು ರುದ್ರಾಕ್ಷಿಮಠ, ಶಿವಬಸವ ನಗಗರ, ಬೆಳಗಾವಿ
Phone: 9986129531

Synopsys

‘ಶಿವಶರಣರ ತೇಜೋವಧೆ’ ಕೃತಿಯು ಸಂಗಮೇಶ ಬಿರಾದಾರ ಅವರು ಸೊಲ್ಲಾಪುರ ಸಿದ್ಧರಾಮೇಶ್ವರ ಕುರಿತು ಬರೆದ ಚರಿತ್ರೆಯ ವಿಮರ್ಶೆಯ ಬರಹಗಳಾಗಿವೆ.  ಈ ಕೃತಿಯಲ್ಲಿನ ಕುರಿತ ಕೆಲವೊಂದು ವಿಚಾರಗಳು ಹೀಗಿವೆ; ಶಿವಯೋಗಿ ಸಿದ್ಧರಾಮೇಶ್ವರರ ಚರಿತ್ರೆಯನ್ನು 13ನೆಯ ಶತಮಾನದಲ್ಲಿ ರಾಘವಾಂಕ ಕವಿಯು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಸಿದ್ಧರಾಮೇಶ್ವರರನ್ನು ಹತ್ತಿರದಿಂದ ಕಂಡು ಅಥವಾ ಅವರ ಸಮಕಾಲೀನರ ಹೇಳಿಕೆಗಳನ್ನು ಆಧರಿಸಿ, ರಾಘವಾಂಕ 'ಸಿದ್ಧರಾಮ ಚಾರಿತ್ರ' ಬರೆದ. ಇಂಥ ಸಾಂಸ್ಕೃತಿಕ ಕೃತಿಯ ವಿಚಾರಗಳನ್ನೇ ಬದಲು ಮಾಡಿ ರಾಘವಾಂಕನ ಹೆಸರಿನಲ್ಲಿ ಮತ್ತೊಂದು ‘ರೊಟ್ಟಿ ಸಿದ್ಧರಾಮೇಶ್ವರ ಚರಿತ್ರೆ'ಯನ್ನು ಸೊಲ್ಲಾಪುರದ ಹಣ್ಣು ಮಂಡಳ ಪ್ರಕಟಿಸಿತು. ನಿಜವಾದ ಸಿದ್ಧರಾಮನ ಜೀವನ ಮರೆಮಾಡಿ, ಅಲ್ಲಿಯ ಎಲ್ಲ ವಿಚಾರಗಳನ್ನು ಪಲ್ಲಟಗೊಳಿಸಲಾಯಿತು. ಶಿವಯೋಗಿ ಸಿದ್ಧರಾಮನನ್ನು ಆಚಾರ್ಯ ಸಿದ್ಧರಾಮನನ್ನಾಗಿ ರೂಪಾಂತರಿಸಿದರು. ಆ ಪುಸ್ತಕವನ್ನು ಮೇಲಿಂದ ಮೇಲೆ ಪುನರ್‌ಮುದ್ರಣಗೊಳಿಸಿದರು. ಕರ್ನಾಟಕದ ತುಂಬ ಪ್ರತಿಭಟನೆಗಳಾದವು. ಆದರೆ, ಆ ಕೃತಿಯ ನಿಜವಾದ ದೋಷಗಳನ್ನು ಎತ್ತಿ ತೋರಿಸುವ ಸಾಹಸವನ್ನು ಮಾಡಿದವರು ಡಾ. ಸಂಗಮೇಶ ಚಿರಾದಾರ. ಇಂಥದೇ ಇನ್ನೊಂದು ವಿವಾದ ಅಲ್ಲಮಪ್ರಭುವಿಗೆ ಸಂಬಂಧಿಸಿದ್ದಾಗಿದೆ. ಈ ಬೊಟ್ಟಿ ಸಿದ್ಧರಾಮ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ಅಲ್ಲಮನನ್ನು ಬೇಡಕುಲದವನು ಎಂದು ಹೇಳರುವುದನ್ನು ಡಾ. ಬಿರಾದಾರ ಅವರು ಸಾಕ್ಷ್ಯಾಧಾರಗಳಿಂದ ಅಲ್ಲಗಳೆದು, ಶಿವಶರಣರ ತೇಜೋವಧೆ ನಡೆಯಬಾರದೆಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ’ ಎಂದಿದೆ.

About the Author

ಲಿಂಗರಾಜ ಸೊಟ್ಟಪ್ಪನವರ

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹಿರೇಮರಳಿಹಳ್ಳಿ ಗ್ರಾಮದವರಾದ ಲಿಂಗರಾಜ ಸೊಟ್ಟಪ್ಪನವರ ಅವರು ಫೆಬ್ರವರಿ 7, 1977ರಲ್ಲಿ ಜನಿಸಿದರು. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಅನೇಕ ಕತೆಗಳು, ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾವಿಗೆ ಐಡೆಂಟಿಟಿ ಇಲ್ಲ ಕವಿತೆಗಳ ಹಸ್ತಪ್ರತಿಗೆ ಕಣವಿ ಕಾವ್ಯ ಪುರಸ್ಕಾರ , ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಡಾ. ನಿರ್ಮಲ್ ವರ್ಮಾ ಅವರ ಹರ್‍ ಬಾರೀಶ್ ಮೇ’ ಕೃತಿಯ ಕನ್ನಡ ಅನುವಾದಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಫೆಲೋಶಿಪ್ ದೊರೆತಿವೆ. ಕೃತಿಗಳು: ಮಾರ್ಗಿ (ಕಥಾ ಸಂಕಲನ) ...

READ MORE

Related Books