ವಚನ ಪ್ರಶ್ನೋತ್ತರ

Author : ಓ. ಎಲ್. ನಾಗಭೂಷಣಸ್ವಾಮಿ

Pages 112

₹ 110.00




Year of Publication: 2021
Published by: ಚಿಂತನ ಚಿತ್ತಾರ
Address: ಮಳಿಗೆ ಸಂಖ್ಯೆ, 2, ಮುದಾ ಕಾಂಪ್ಲೆಕ್ಸ್, ಐ ಬ್ಲಾಕ್, ರಾಮಕೃಷ್ಣ ನಗರ, ಆಂದೋಲನ ಸರ್ಕಲ್ ಹತ್ತಿರ, ಮೈಸೂರು-570022
Phone: 9945668082

Synopsys

ಖ್ಯಾತ ಲೇಖಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಅವರ ‘ವಚನ ಪ್ರಶ್ನೋತ್ತರ’ ಕೃತಿಯು ಓದುಗರ, ವಚನ ಸಂಬಂಧಿ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಇತ್ತಿಚಿನ ದಿನಗಳಲ್ಲಿ ಲಭ್ಯವಿರುವ ಸುಮಾರು ಇಪ್ಪತ್ತು ಸಾವಿರ ವಚನಗಳಲ್ಲಿ ಹೆಚ್ಚೆಂದರೆ ಎರಡು ಮೂರು ನೂರು ವಚನಗಳು ಮತ್ತೆ ಮತ್ತೆ ಕಣ್ಣಿಗೆ, ಕಿವಿಗೆ ಬೀಳುತ್ತವೆ. ವಚನಗಳನ್ನು ಕುರಿತ ಬರವಣಿಗೆಯೂ ಕೆಲವು ಸಂಗತಿಗಳನ್ನು ಹಿಡಿದಿಟ್ಟುಕೊಂಡು ಸುಮಾರು ಐವತ್ತು ವರ್ಷಗಳಿಂದ ಕಿಂಚಿತ್ತೂ ಬೇಸರವಿಲ್ಲದೆ ಪುನರಾವರ್ತನೆ ಮಾಡುತ್ತ ಬಂದಿವೆ. ವಚನಗಳ ಬಗ್ಗೆ ಇನ್ನು ಶೋಧಿಸಬೇಕಾದದ್ದು ಏನೂ ಇಲ್ಲ ಅನ್ನುವಂತಿಲ್ಲ. ಇಂಥ ಹೊತ್ತಿನಲ್ಲಿ ’ವಚನ ಪ್ರಶ್ನೋತ್ತರ’ ಎನ್ನುವ ಕಿರು ಹೊತ್ತಗೆಯ ಮೂಲಕ ಶೋಧದ ಇನ್ನೊಂದು ದಾರಿ ಆಸಕ್ತರಿಗೆ ಕಂಡೀತು ಅನ್ನುವ ಒಲವು ಈ ಪುಸ್ತಕದಲ್ಲಿದೆ.

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ,  ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Related Books