ತಲ್ಲಣಿಸದಿರು ಮನವೆ-ವಚನಗಳ ಸಂಕಲನ

Author : ಸಿ.ಎಸ್. ಆನಂದ

Pages 76

₹ 80.00




Year of Publication: 2017
Published by: ಕಾದಂಬರಿ ಪ್ರಕಾಶನ
Address: ಕಲಬುರಗಿ
Phone: 9731826634

Synopsys

ಲೇಖಕ ಸಿ.ಎಸ್. ಆನಂದ ಅವರ ವಚನಗಳ ಸಂಕಲನ-ತಲ್ಲಣಿಸದಿರು ಮನವೆ. ವೈರಾಗ್ಯಮೂರ್ತಿ ಶ್ರೀ ದಯಾನಂದ ಶಿವಯೋಗಿಗಳ ಅಂಕಿತನಾಮದಲ್ಲಿ ವಚನಗಳು ರಚಿತಗೊಂಡಿವೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಕಿರಣ್ ಪಾಟೀಲ್ ಅವರು ‘ಮಾನವೀಯ ಸಂಬಂಧಗಳ ಆರ್ದ್ರತೆಯಿಂದ ಇಲ್ಲಿಯ ವಚನಗಳು ಮಿಡಿಯುತ್ತವೆ. ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಆಡಂಬರ, ಡಾಂಭಿಕತೆ, ಮೋಸ-ವಂಚನೆ, ದ್ವೇಷ-ಅಸೂಯೆ ಹೀಗೆ ಹಲವಾರು ವಿಷಯ ವೈವಿಧ್ಯತೆಯನ್ನು ತನ್ನ ಗರ್ಭದಲ್ಲಿರಿಸಿಕೊಂಡು ರಚನೆಗೊಂಡ ವಚನಗಳು ಜ್ಞಾನಪಿಪಾಸುಗಳ ಮನಸ್ಸನ್ನು ತಣಿಸುತ್ತವೆ. ವಚನ ಸಂಸ್ಕೃತಿಯ ವಿಶಾಲ ನೆಲೆಯನ್ನು ತೋರುತ್ತವೆ. ಅಂತರಂಗದ ಧ್ಯಾನದಲ್ಲಿ ಕುಳಿತು ಸಾಮಾಜಿಕ ಧ್ಯಾನವನ್ನು ಹಾಗೂ ವರ್ತಮಾನವನ್ನೂ ವಚನಗಳಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಸಿ.ಎಸ್. ಆನಂದ

ಯುವ ಸಾಹಿತಿ ಸಿ.ಎಸ್. ಆನಂದ: ಮೂಲತಃ ಕಲಬುರಗಿಯವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರು. ಇವರ ಕಥೆ, ಕವನ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಸ್ತವದ ಮತ್ತು ಸಂಕೇತವಾದದ ಪದರುಗಳ ಪರಿಮಿತಿಯನ್ನು ತಮ್ಮ ಕಥೆ-ಕಾವ್ಯದಲ್ಲಿ ಬಹಳ ಸುಲಭವಾಗಿ ಮೀರಲೆತ್ನಿಸುತ್ತ ಮುನ್ನಡೆಸಿದ್ದಾರೆ. ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸುಮಾರು ಮೂವತ್ತೂ ಹೆಚ್ಚು ಭಾಷಣಗಳು, ಕಲಬುರಗಿ ದೂರದರ್ಶನ ಕೇಂದ್ರ ಮತ್ತು ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಕೃತಿಗಳು:  ಹಡೆದವ್ವ, ಜೀವನದಿ ( ಕಥಾಸಂಕಲನಗಳು), ಒಡಲಹಾಡು, ಮಧುರ ಹನಿಗಳು (ಕವನ ಸಂಕಲನಗಳು) ತಲ್ಲಣಿಸದಿರು ಮನವೆ (ವಚನಗಳ ಸಂಕಲನ), ಬಸವನಾಡಿನ ಬೆಳಕು (ಜಾನಪದ ತ್ರಿಪದಿಗಳ ಸಂಕಲನ), ಸಂಪ್ರೀತಿ (ಮುಕ್ತಕಗಳ ...

READ MORE

Related Books