ಅಂಬಿಗರ ಚೌಡಯ್ಯ

Author : ಬಸವರಾಜ ಸಬರದ

Pages 56

₹ 25.00




Year of Publication: 2009
Published by: ಬಸವತತ್ತ್ವ ಪ್ರಚಾರ ಹಾಗೂ ಸಂಶೋಧನಾ ಕೇಂದ್ರ
Address: ನಂ.597, 6ನೇ ಅಡ್ಡರಸ್ತೆ, 4ನೇ ಹಂತ, ಬಿ.ಇ.ಎಂ.ಎಲ್ ಬಡಾವಣೆ, ರಾಜರಾಜೇಶ್ವರಿ ನಗರ, ಬೆಂಗಳೂರು- 98
Phone: 9448685544

Synopsys

‘ಅಂಬಿಗರ ಚೌಡಯ್ಯ’ ಲೇಖಕ ಬಸವರಾಜ ಸಬರದ ಅವರ ಉಪನ್ಯಾಸದ ಪಠ್ಯರೂಪ. ಕೃತಿಯ ಕುರಿತು ತಿಳಿಸುತ್ತಾ 1985ರ ಜನೇವರಿ 12ರಂದು ರಾಯಚೂರ ಜಿಲ್ಲೆಯ ಹಲಗೇರಿಯಲ್ಲಿ ಹದಿನೈದನೇ ಉಪನ್ಯಾಸ ಶಿಬಿರ ನಡೆಯಿತು. ಆ ಸಂದರ್ಭದಲ್ಲಿ ಈ ವಿಷಯದ ಬಗೆಗೆ ಉಪನ್ಯಾಸ ಮಾಡಲು ಪ್ರಸಾರಾಂಗದ ನಿರ್ದೇಶಕರಾದ ಡಾ.ಮ.ಗು. ಬಿರಾದಾರ ಗುರುಗಳು ನನಗೆ ಅವಕಾಶಕೊಟ್ಟರು ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅಂಬಿಗರ ಚೌಡಯ್ಯನವರನ್ನು ಅವರ ವಚನಗಳ ಮುಖಾಂತರ ಹೊಸ ದೃಷ್ಟಿಕೋನದಿಂದ ನೋಡಲು ಇಲ್ಲಿ ಪ್ರಯತ್ನಿಸಿದ್ದೇನೆ, ಇದಕ್ಕೆ ಸಂಬಂಧಿಸಿದಂತೆ ಓದುಗರು-ವಿಮರ್ಶಕರಿಂದ ಬರುವ ರಚನಾತ್ಮಕ ಟೀಕೆಗಳಿಗೆ ಸದಾ ಸ್ವಾಗತ ಎಂದಿದ್ದಾರೆ. ಇಲ್ಲಿ ಹಿನ್ನೆಲೆ, ಚೌಡಯ್ಯನ ದೃಷ್ಟಿಯಲ್ಲಿ ಧರ್ಮ-ದೇವರು, ಚೌಡಯ್ಯನ ವಚನಗಳಲ್ಲಿ ಗುರು-ಲಿಂಗ-ಜಂಗಮ, ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ವಿಡಂಬನೆ, ಚೌಡಯ್ಯ ಮತ್ತು ಬಂಡಾಯ ಹಾಗೂ ಸಮಾರೋಪ ಎಂಬ ಲೇಖನಗಳು ಸಂಕಲನಗೊಂಡಿವೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books