ಪ್ರಾಚೀನ ಪ್ರತಿಭೆಗಳಲ್ಲಿ ಬಸವಣ್ಣನವರಷ್ಟು ನಮ್ಮ ಮನಸ್ಸನ್ನು ಯಾರೂ ಕಾಡಿದವರಿಲ್ಲ. ಬರೆದಷ್ಟು ಬರೆಯಿಸಿಕೊಳ್ಳುವ ಈತ ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ರೂಪಗಳಲ್ಲಿ ಎಲ್ಲ ರೀತಿಗಳಲ್ಲಿ ಮೂಡಿ ಬರುತ್ತಲಿರುವುದೇ ಒಂದು ಸೋಜಿಗ. ಈಗ ಅಂತಹ ಒಂದು ಹೊಸ ಸೋಜಿಗವೆನಿಸಿದೆ, ' ಮಾನವತಾವಾದಿ ಬಸವಣ್ಣ’ ಈ ಗ್ರಂಥ ಸೃಜನ ಮತ್ತು ಸಂಶೋಧನೆಗಳ ಕೂಡಲಸಂಗಮವೆನಿಸಿದೆ. ಸೃಜನದ ಸೊಗಸಾದ ಕಲ್ಪನೆ, ಸಂಶೋಧನೆಯ ನಿಷ್ಠೂರ ಸತ್ಯಗಳ ಈ ಕೃತಿಸಂಗಮದಲ್ಲಿ ಬಸವಣ್ಣ ಪ್ರವಸುತ್ತಲಿರುವ ಬಗ್ಗೆ ತುಂಬಾ ಆಕರ್ಷಕವಾಗಿದೆ. ಸಂಶೋಧನೆ ಕಾರಣವಾಗಿ ಅನೇಕ ಸಂದೇಹಗಳಿಗೆ ಇಲ್ಲಿ ಸಮಾಧಾನವಿದೆ, ಪ್ರಶ್ನೆಗಳಿಗೆ ವಚನಗಳಿಂದಲೇ ಉತ್ತರಿಸಿದ ಪ್ರಾಮಾಣಿಕ ಪ್ರಯತ್ನವಿದೆ. ಈ ಕಾರಣದಿಂದಾಗಿ ಪ್ರಸ್ತುತ ಕೃತಿ ಸಾಮಾನ್ಯರನ್ನು ವಿದ್ವಾಂಸರನ್ನು ಏಕ ಕಾಲಕ್ಕೆ ಒಳಗೆ ಸೆಳೆಯುತ್ತದೆ. 'ಯಕ್ಷಗಾನೀಯ ಶೈಲಿ ' ಈ ಗ್ರಂಥದ ಇನ್ನೊಂದು ಆಕರ್ಷಣೀಯವೆನಿಸಿದೆ. ಆಗಾಗ ಲೇಖಕರು ಭಾಗವತ ನಂತೆ ಮಧ್ಯೆ ಮಧ್ಯೆ ಬಂದು ಪಾತ್ರ ಪಾತ್ರಗಳಲ್ಲಿ ಪಾತ್ರ ಓದುಗನಲ್ಲಿ ಕೊಂಡಿಯಾಗಿ ನಿಲ್ಲುವ ಬಗೆ, ಶೈಲಿಗೆ ವಿನೂತನತೆಯನ್ನು ತಂದು ಕೊಟ್ಟಿದೆ. ಇದರಿಂದಾಗಿ ಒಂದು ಹೊಸ ಶೈಲಿ ಮಾದರಿ ಇಲ್ಲಿ ಆಕಾರ ಪಡೆದಿತ್ತು ಚಂದ್ರಶೇಖರ ವಸ್ತ್ರದ ಅವರು ಈ ಆದರ್ಶದಲ್ಲಿ ಮಿಕ್ಕ ಶರಣ ಶಿಲ್ಪಿಗಳನ್ನು ಕಂಡರಿಸುವರೆಂದು ಹಾರೈಸುತ್ತೇನೆ .
©2024 Book Brahma Private Limited.