ವಚನ ತ್ರಿಮೂರ್ತಿಗಳು

Author : ವೀಣಾ ಬನ್ನಂಜೆ

Pages 84

₹ 70.00




Year of Publication: 2020
Published by: ರವೀಂದ್ರ ಪುಸ್ತಕಾಲಯ,
Address: ಮರಾಜಪೇಟೆ, ಸಾಗರ-577401

Synopsys

12ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ ಹಾಗೂ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು ಅವರನ್ನು ವಚನಗಳ ಹಿನ್ನೆಲೆಯಲ್ಲಿ ಅವರ ವ್ಯಕ್ತಿತ್ವವದ ಎತ್ತರವನ್ನು ಚಿತ್ರಿಸಿದ ಕೃತಿ-ವಚನ ತ್ರಿಮೂರ್ತಿಗಳು. ಶತಶತಮಾನದಿಂದ ಮೂಢನಂಬಿಕೆಯನ್ನೇ ಬದುಕಿನ ಮಾರ್ಗ ಎಂದು ನಂಬಿದ್ದ ಅಂದಿನ ಕಾಲದ ನಡೆಯನ್ನು ಹೊಸ ದಿಕ್ಕಿನತ್ತ ತಿರುಗಿಸಿ, ಸಾಮಾಜಿಕ ಕ್ರಾಂತಿಗೆ ಕಾರಣರಾದ ಶಿವಶರಣರು, ವಿಶ್ವಕ್ಕೂ ಬದುಕಿನ ಸಾಮರಸ್ಯದ ನೋಟ ನೀಡಿದ ವಚನಕಾರರು ಅದ್ವಿತೀಯರು. ಎಲ್ಲ ಶಿವಶರಣರು ಪ್ರಮುಖರಾದರೂ ಲೇಖಕಿ ಬಸವ, ಅಕ್ಕ ಹಾಗೂ ಅಲ್ಲಮರನ್ನು ಮಾತ್ರ ಆಯ್ದುಕೊಂಡು ಅವರ ವಚನಗಳನ್ನು ವಿಶ್ಲೇಷಿಸಿದ್ದಾರೆ. ಇಲ್ಲಿಯ ಬರಹ ಶೈಲಿಯು, ಒಳನೋಟವು ಓದುಗರ ಗಮನ ಸೆಳೆಯುತ್ತದೆ.

 

About the Author

ವೀಣಾ ಬನ್ನಂಜೆ

ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...

READ MORE

Related Books