ಬಸವನ ಕಂಡಿರಾ 2

Author : ಸುರೇಶ ಸಗರದ

Pages 48

₹ 50.00




Year of Publication: 2018
Published by: ಜಿಲ್ಲಾ ಸಾಹಿತ್ಯ ಪರಿಷತ್ತು
Address: ರಾಯಚೂರು

Synopsys

“ಬಸವನ ಕಂಡಿರಾ 2” ಸುರೇಶ ವಿ. ಸಗರದ ಅವರ ವಚನ ಸಂಕಲನವಾಗಿದೆ. ನೀನೊಂದು ಮಹಾ ಅಣು ಮಹಾ ಶಕ್ತಿ. ನಾನು ಆ ಶಕ್ತಿಯ ಒಂದು ತುಣುಕು. ಮಹಾ ಅಣುವಿನಲ್ಲಿ ಒಂದಾಗಬೇಕಾದರೆ ಭಕ್ತಿ ಬೇಕು ಅರಿವು ಬೇಕು. ಇದನ್ನು ಎನಗೆ ಕರುಣಿಸು ಬಸವಣ್ಣಾ. ಇದೆಲ್ಲಾ ನನ್ನಲ್ಲಿ ಅಳವಟ್ಟಾಗ ನನಗೆ ಬಯಲು ಕಾಣುತ್ತದೆ. ಎಲ್ಲವನ್ನು ಒಳಗೊಂಡು ಕಣ್ಣಿಗೆ ಕಾಣದಿರುವದೆ “ಬಯಲು” ಅಲ್ಲಿ ನಾನಿಲ್ಲ - ನೀನಿಲ್ಲ. ಗಾಳಿಯಲ್ಲಿ ಗಾಳಿ, ನೀಲಾಂಬರದಲ್ಲಿ ಮಿಂಚು ಅಷ್ಟೇ! ಶರಣ ಜೀವಿಗಳಾದ ಸಗರದರವರು ಬಸವ ತತ್ವದ ನಿಜ ಆರಾಧಕರಾಗಿದ್ದಾರೆ. ಅವರ ಬಸವ ತತ್ವಗಳ ಅಧ್ಯಯನ, ನಿಷ್ಠೆ ಮತ್ತು ಬಸವ ತತ್ವ ಜಗದಗಲ - ಮುಗಿಲಗಲ ಹಬ್ಬಲಿ ಎಂಬ ಕಳಕಳಿ ಮೂರು ಮುಪ್ಪರಿಗೊಂಡು ಇಲ್ಲಿನ ವಚನಗಳು ನಮ್ಮನ್ನು ಆಧ್ಯಾತ್ಮ ಲೋಕಕ್ಕೆ ಕೊಂಡೊಯ್ಯುತ್ತವೆ.

About the Author

ಸುರೇಶ ಸಗರದ

ಸುರೇಶ ಸಗರದ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಬಸವ ತತ್ತ್ವದ ಬಗ್ಗೆ ವಿಶೇಷ ಒಲವು ಹೊಂದಿರುವ ಅವರು ಅವರ ಬಗ್ಗೆ ಎರಡು ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಹೃದಯದಿಂದ ಹೃದಯಕ್ಕಾಗಿ, ಮಧುಮೇಹ ಜೀವನ ಸಂಗಾತಿ, ಅಂಗದಾನ, “ಬಸವನ ಕಂಡಿರಾ 2” ಬಸವನ ಕಂಡಿರಾ ...

READ MORE

Related Books