
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಬರೆದ ’ಅಲ್ಲಮಪ್ರಭು ದೇವರ ವಚನ ನಿರ್ವಚನ’ ಕೃತಿಯು 1998 ರಲ್ಲಿ ಮೊದಲ ಮುದ್ರಣ ಕಂಡಿತ್ತು. ಇದರ 2ನೇ ಭಾಗವು 2001ರಲ್ಲಿ ಮೊದಲು ಮುದ್ರಣಗೊಂಡಿತ್ತು. ಸಮಗ್ರ ಸಂಪುಟ ಶೀರ್ಷಿಕೆಯಡಿ 2001 ಹಾಗೂ 2016ರಲ್ಲಿ ಮತ್ತೆ ಪ್ರಕಟಗೊಳ್ಳುತ್ತಿದೆ. ಅಲ್ಲಮನ ಅಪರೂಪದ ಅನುಭಾವವು ಅವರ ವಚನಗಳಲ್ಲಿ ಸೂರೆಗೊಂಡಿದೆ. ಅಲ್ಲಮನ ಬೆಡಗಿನ ವಚನಗಳನ್ನು ಸ್ವಾಮೀಜಿ ಅವರು ಸರಳವಾಗಿ ಅರ್ಥೈಸಿ, ನಿರೂಪಿಸಿದ್ದಾರೆ. ಇವರ ಬರೆಹದಲ್ಲಿ ಕಾವ್ಯ ಮಾಧುರ್ಯವಿದೆ. ತತ್ವಾನುಭವವೂ ಇದೆ. ಅಲ್ಲಮನ ವಚನಗಳ ಭಾವವನ್ನು ವಿವರಿಸಿರುವ ಕೃತಿ ಇದು.
©2025 Book Brahma Private Limited.