ಅಂತರಾಳದ ಪ್ರಭೆ

Author : ಪಂಚಾಕ್ಷರಿ ಬಿ. ಪೂಜಾರಿ

Pages 62

₹ 50.00




Year of Publication: 2007
Published by: ಶರಣಬಸಪ್ಪಗೌಡ ಬಮಣ್ಣಿ ಸಾತನೂರ. 
Address: ದಂಡಗುಂಡ, ತಾ: ಚಿತ್ತಾಪುರ, ಜಿಲ್ಲೆ: ಕಲಬುರಗಿ.

Synopsys

ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರ ವಚನಗಳ ಸಂಕಲನ. ಸಾಹಿತಿ ಡಾ. ವಿ.ಜಿ. ಪೂಜಾರ ಅವರು ಕೃತಿಗೆ ಮುನ್ನುಡಿ ಬರೆದು ‘ ದಂಡಗುಂಡ ಬಸವಣ್ಣ ದೇವಸ್ಥಾನದ  ಆರ್ಚಕರಾಗಿ ದೈವೀ ಭಕ್ತಿ ಪೂಜಾನಿಷ್ಠೆಯಿಂದ ಸಾಹಿತ್ಯ ಶಕ್ತಿ ತಮ್ಮಲ್ಲಿ (ಪಂಚಾಕ್ಷರಿ ಬಿ. ಪೂಜಾರಿ) ಮುಪ್ಪರಿಸಿಕೊಂಡು  "ಶ್ರೀಗುರು ದಂಡಗುಂಡ ಬಸವ" ಎಂಬ ಅಂಕಿತನಾಮದಿಂದ ವಚನಗಳು ರಚಿಸಿದ್ದಾರೆ. ಮನುಕುಲದ ಎಳ್ಗೆಯ ಉದ್ದೇಶವನ್ನು ಬೋಧಿಸುವ ನೀತಿಭೋಧೆ  ಹಾಸುಹೊಕ್ಕಾಗಿವೆ ಮಾನವಿಯ ಕಳಕಳಿ ವೈಜಾನಿಕ, ವೈಚಾರಿಕ ಮನೋಭಾವದಿಂದಿವೆ ಮೈಲಿಗೆ, ಡಂಭಾಚಾರ,ವೇಷಧಾರಿಗಳನ್ನು ಅವರ ವಚನಗಳಲಿ ವಿಡಂಬಿಸಿದುದು ಸ್ವಾಗತಾರ್ಹವೆನಿಸಿದೆ’ ಎಂದು ಪ್ರಶಂಸಿಸಿದ್ದಾರೆ. 

ಸಾಹಿತಿ ಜಿ.ಎಸ್.ಬಸವರಾಜ ಶಾಸ್ತ್ರಿ ಯಾದಗಿರ ತಮ್ಮ ಅಭಿಪ್ರಾಯದಲ್ಲಿ.‘ಪೂಜಾರಿಯವರು  ಇಂದಿನ ಸಮಾಜದಲ್ಲಿ "ತುಲಭಾರದ ಬಗ್ಗೆ, ಮತ್ತು ಲಕ್ಷದೀಪೋತ್ಸವದ ಹಾವಳಿಯ ಬಗ್ಗೆ ಕಟುವಾಗಿ ಹೇಳಿ ಸಮಾಜದ ಕುಂದು ಕೊರತೆಗಳನ್ನು ಓರೆ-ಕೊರೆಗಳನ್ನು ಎತ್ತಿ ತೋರಿಸಿದ್ದಾರೆ’ ಎಂದು ಶ್ಲಾಘಿಸಿದ್ದಾರೆ. 

ಸಾಹಿತಿ ಬಸವರಾಜ ಚೇಂಗಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ‘"ಜಾತಿ ಜಾತಿಯಂದು ಎತ್ತಿಕಟ್ಟಿ ಸಮಾಜ ಹದಗೆಡಿಸುವ ಕಿಡಿಗೆಡಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಚನಕಾರರು ಸಮಾಜದ ಅಂಕು-ಡೊಂಕುಗಳನ್ನು ತಿದ್ದುಲು ಮುಂದಾಗಿರುವುದು ಸ್ತುತ್ಯವಾದ ಕೆಲಸ. ಬಿತ್ತಿದ್ದನೆ ಬೆಳೆಯಬೇಕು ಮಾಡಿದ್ದನು ಉಣ್ಣಬೇಕು ಎಂದು ಎಚ್ಚರಿಸುವ ಇವರ ವಚನಗಳು,  ದುಶ್ಚಟದಿಂದ ಪರಸ್ತ್ರೀ ಸಂಗದಿಂದ ದೂರಿರು ಎಂದು ಕಿವಿ ಮಾತು ಹೇಳುತ್ತಾರೆ. ಜಾತಿಯ ಜಾಡು, ಒಣಜಂಭ,ಎಂಬ ವಚನಗಳಲ್ಲಿ ಸಾಮಾಜಿಕ ಕಳಕಳಿ ಇದ್ದು ವಚನಗಳಲ್ಲಿ ಪರಿಪೂರ್ಣತೆ ಕಂಡು ಬರುತ್ತದೆ ’ ಎಂದು ಶ್ಲಾಘಿಸಿದ್ದಾರೆ. 

 

About the Author

ಪಂಚಾಕ್ಷರಿ ಬಿ. ಪೂಜಾರಿ
(10 August 1960)

ಕವಿ ಪಂಚಾಕ್ಷರಿ ಬಿ. ಪೂಜಾರಿ  ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದವರು. ವೃತ್ತಿಯಿಂದ  ದಂಡಗುಂಡ ಬಸವಣ್ಣನ ದೇವಸ್ಥಾನದ ಅರ್ಚಕರು. ಬಿ.ಎ. ಪದವೀಧರರು. ತಂದೆ ಬಸವಣ್ಣೆಪ್ಪ ಪೂಜಾರಿ ತಾಯಿ ಮಹಾದೇವಮ್ಮ ಪೂಜಾರಿ. ದಂಡಗುಂಡ ಸರಕಾರಿ  ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರು. ಕಸಾಪ ದಿಗ್ಗಾವಿ ವಲಯ ಅಧ್ಯಕ್ಷರು.  ಕೃತಿಗಳು: ಅಂತರಾಳದ ಪ್ರಭೆ (ವಚನಗಳ ಸಂಕಲನ), ಗುಡ್ಡದ ಗುಡುಗು (ತತ್ವಪದಗಳ ಸಂಕಲನ), ಮನದಾಳದ ಮಾತು (ನುಡಿಮುತ್ತುಗಳು), ತತ್ವಪದ ಸಂಪದ (ತತ್ವಪದಗಳ ಸಂಪಾದನಾ ಗ್ರಂಥ), ದಂಡಗುಂಡ ಬಸವಣ್ಣ ನಾಮಾವಳಿ,  ಸರಳೀಕರಣ ಇಷ್ಟಲಿಂಗ ಪೂಜಾ ವಿಧಾನ, ದಿಗ್ಗಾವಿ ದೀಪ (ಕವನ ಸಂಕಲನ)  ಪ್ರಶಸ್ತಿ-ಗೌರವಗಳು: ಚಿತ್ತಾಪುರ ತಾಲೂಕು ಕನ್ನಡ ...

READ MORE

Related Books