ವಚನಸಿರಿ (ಆಧುನಿಕ ವಚನಗಳು)

Author : ಶೇಖರಯ್ಯ ಟಿ. ಎಚ್. ಎಂ

Pages 100

₹ 100.00




Year of Publication: 2021
Published by: ವಿಶ್ವಾಸ ಪ್ರಕಾಶನ
Address: ಗೆದ್ದಲಗಟ್ಟೆ, ಅಂಚೆ: ಕೂಡ್ಲಿಗಿ ತಾಲೂಕು. ವಿಜಯನಗರ ಜಿಲ್ಲೆ-583135
Phone: 9164241520

Synopsys

ಲೇಖಕ ಶೇಖರಯ್ಯ ಟಿ.ಎಚ್.ಎಂ. ಅವರ ಕೃತಿ-ವಚನಸಿರಿ (ಆಧುನಿಕ ವಚನಗಳು). ನಿರೂಪಣೆಯಲ್ಲಿ ವಚನಗಳ ಶೈಲಿ ಹೊಂದಿದ್ದರೂ ವಿಷಯ ವಸ್ತುಗಳು ಆಧುನಿಕ ಸಮಸ್ಯೆ-ಪರಿಹಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಂದಿನ ಅಗತ್ಯ, ಅಳವಡಿಸಿಕೊಳ್ಳಬೇಕಾದ ಸಂಸ್ಕಾರಗಳು, ನೀತಿ ನಿರೂಪಣೆ ಇತ್ಯಾದಿಗಳನ್ನು ವಸ್ತುವಾಗಿಸಿಕೊಂಡ ವಚನಗಳು ಓದುಗರ ಗಮನ ಸೆಳೆಯುತ್ತವೆ. ಖ್ಯಾತ ಸಾಹಿತಿ ಡಾ. ಅಮರೇಶ ನುಗಡೋಣಿ ಅವರು ಈ ಕೃತಿಗೆ ಮುನ್ನುಡಿ ಬರೆದು ‘ಶೇಖರಯ್ಯಅವರ ವಚನಗಳಲ್ಲಿ, ಓದಿಸಿಕೊಳ್ಳುವ ಗುಣ, ನೆನಪಿನಲ್ಲಿ ಉಳಿಯುವ ಲಯವಿದೆ, ಮಾಗಿದ, ಪಕ್ವಗೊಂಡ ವಿಚಾರಗಳನ್ನು ಕಾವ್ಯರೂಪದಲ್ಲಿ ಹೆಣೆಯುವ ರೀತಿ ಈ ಕವಿಗೆ ಸಿದ್ಧಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ಶೇಖರಯ್ಯ ಟಿ. ಎಚ್. ಎಂ
(01 July 1984)

ಶೇಖರಯ್ಯ ಟಿ. ಎಚ್. ಎಂ ಅವರು ಗೆದ್ದಲಗೆಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು. ಎಂ. ಎ, ಬಿ. ಎಡ್ ಪದವೀಧರರು. ಸಾಹಿತ್ಯ ಕೃಷಿ ಇವರ ಹವ್ಯಾಸ.  ಕೃತಿಗಳು: ವಚನಸಿರಿ ( ಆಧುನಿಕ ವಚನಗಳು) ಪ್ರಶಸ್ತಿ-ಪುರಸ್ಕಾರ:  ಚಳ್ಳಕೆರೆಯ  ರೋಟರಿಕ್ಲಬ್ ನಿಂದ ಕನ್ನಡಸಿರಿ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ಹಲವು ಆಶುಭಾಷಣ ಗಳಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿವೆ. ...

READ MORE

Related Books