ಎಲ್ಲೋ ಹುಡುಕಿದೆ

Author : ಈರಣ್ಣ ಬೆಂಗಾಲಿ

Pages 199

₹ 126.00




Year of Publication: 2022
Published by: ಕೃಷ್ಣರುಣ ಪ್ರಕಾಶನ
Address: ನೇತಾಜಿ ನಗರ ರಾಯಚೂರು- 584103
Phone: 9986724198

Synopsys

"ಎಲ್ಲೋ ಹುಡುಕಿದೆ" ವಚನ ಸಂಕಲನದ ಮೂಲದ್ರವ್ಯ ವೈಚಾರಿಕ ಚಿಂತನ ಮತ್ತು ಮಾನವೀಯ ಮೌಲ್ಯ ಬೆಂಗಾಲಿಯವರ ಅಧ್ಯಯನಶೀಲತೆಯ ಜೊತೆ ಜೊತೆಗೆ ಕಲಾವಿದನ ತೀಕ್ಷ ಸಂವೇದನೆಯ ಭಾವ ತೀವ್ರತೆ ಅವರ ಆಧುನಿಕ ವಚನಗಳಲ್ಲಿ ಕೆನೆಗಟ್ಟಿದೆ. ಕಾವ್ಯ ಶೈಲಿ ಹಾಗೂ ಜೀವನ ದರ್ಶನ ಅಂತಃ ಚಕ್ಷುವಾಗಿ ಮೂಡಿಬಂದಿದೆ. ದೀನ ದಲಿತರ, ದುರ್ಬಲರ ನೊಂದೆದೆಗೆ ಸಾಂತ್ವನದ ಹಿಮ ಬಿಂದುವಿನ ತಂಗರುಳು ಮಾತೃತ್ವದ ವಾತ್ಸಲ್ಯದಂತೆ ಎದ್ದು ಕಾಣುತ್ತಿರುವುದು ಬರವಣಿಗೆಯ ಸೂಕ್ಷ್ಮತೆ, ಹನ್ನೆರಡನೆಯ ಶತಮಾನದ ವಚನ ಚಳುವಳಿ ಶತಶತಮಾನಕೂ ನಿತ್ಯ ನಿರಂತರವಾಗಿ ಪ್ರವಹಿಸುವ ಜೀವನದಿ. ಪ್ರಜ್ಞಾವಂತರ ಆಂತರ್ಯದಲ್ಲಿ ಸದಾ ಚೇತನಾಪೂರ್ಣವಾಗಿ ಮನುಕುಲದ ಉದ್ಧಾರಕ್ಕಾಗಿ ಹಾಗೂ ವಿಶ್ವದ ಶಾಂತಿಯ ಕುರುಹಾಗಿ ಜನಮನದ ಹೃದಯಾಂತರಾಳದಲಿ ರಕ್ಷಣೆಯಾಗಿ ಮೊರೆಯುತ್ತದೆ. ದೇಶದ ಇಂದಿನ ವ್ಯವಸ್ಥೆಯನ್ನು ಕುರಿತಂತೆ ಈರಣ್ಣ ಬೆಂಗಾಲಿಯವರಿಗೆ ಸಾತ್ವಿಕ ಕೋಪವಿದೆ.ಅವರ ಪ್ರತಿಯೊಂದು ವಚನಗಳಲ್ಲಿ ಪರಿಸರದ ಬಗ್ಗೆ ಅಪಾರ ಪ್ರೀತಿ, ಗೋಮುಖವ್ಯಾಘ್ರತನದ ಬಗ್ಗೆ ವಿರೋಧ ಹಾಗೂ ಆಷಾಢಭೂತಿಗಳ ಕುಕೃತ್ಯಗಳಿಂದ ಆದೆಷ್ಟೋ ದುರ್ಬಲರು ದುರಂತದತ್ತ ಸಾಗುತ್ತಿರುವುದರ ಬಗ್ಗೆ ಕ್ರೋಧವಿದೆ. ಅಲ್ಲದೇ ಮೂಲತಃ ವ್ಯಂಗ್ಯಚಿತ್ರಕಾರರಾಗಿರುವುದರಿಂದ ಶಬ್ದಗಳ ಒಡಲಂತರಾಳದಲ್ಲಿ ಚಿತ್ರಕ ಶಕ್ತಿಯನ್ನು ಕಣ್ಣಿಗೆ ಕಟ್ಟುವಂತೆ ರೂಪಿಸಿದ್ದಾರೆ ಎನ್ನುತ್ತಾರೆ ಅಯ್ಯಪ್ಪಯ್ಯ ಹುಡಾ.

About the Author

ಈರಣ್ಣ ಬೆಂಗಾಲಿ

ಈರಣ್ಣ ಬೆಂಗಾಲಿ ಅವರು ರಾಯಚೂರು ನಗರದವರು. ಫ್ರಿಲಾನ್ಸರ್ ಆಗಿದ್ದಾರೆ. ಗಜಲ್, ಕಥೆ, ಕವನ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಕಥೆ, ಮಕ್ಕಳ ಕವನ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ಇದುವರೆಗೆ ಇವರ ಹದಿನೈದಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. 'ಅರಿವಿನ ಅಂಬರ ಅಂಬೇಡ್ಕರ್' ಗಜಲ್ ಕೃತಿಗೆ 2020ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, 'ಅಪರೂಪದ ಕನ್ನಡ ಮೇಷ್ಟ್ರು' ಕೃತಿಗೆ 2021 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ  ಸೇರಿದಂತೆ ಇವರ ಇನ್ನಿತರ ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಹಂಪಿ ಉತ್ಸವ, ...

READ MORE

Related Books