ಸತ್ಯ ಸಾಕ್ಷಿಗಳು (ವಚನಗಳ ವಿಶ್ಲೇಷಣೆ)

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 224

₹ 180.00




Year of Publication: 2020
Published by: ಬಸವ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬೈಚನಾಳ ಅವರು 12ನೇ ಶತಮಾನದ ಆಯ್ದ ಶರಣರ ವಚನಗಳನ್ನು ವಿಶ್ಲೇಷಿಸಿದ ಕೃತಿ-ಸತ್ಯ ಸಾಕ್ಷಿಗಳು. 101 ವಚನಗಳನ್ನು ವಿಶ್ಲೇಷಣೆಗೆ ತೆಗೆದುಕೊಂಡಿದ್ದಾರೆ. ಬಸವಾದಿಶರಣರ ತತ್ವಗಳನ್ನು ಮೈಗೂಡಿಸಿಕೊಂಡಿರುವ ಲೇಖಕರು ವಚನಗಳನ್ನು ತಮ್ಮದೇ ರೀತಿಯಲ್ಲಿ ಅರ್ಥ ವಿವರಣೆ ನೀಡಿ, ವಿಶ್ಲೇಷಿಸಿದ್ದಾರೆ. ಶಿವಶರಣರು ಕಂಡುಕೊಂಡ ಸತ್ಯದ ಕಾಯಕ-ದಾಸೋಹ, ಪ್ರಾಮಾಣಿಕತೆ, ನಿಷ್ಠೆ, ಮುಂತಾದ ಸದ್ಗುಣಗಳ ದರ್ಶನ ಮಾಡಿಸುವು ಈ ಕೃತಿಯ ಉದ್ದೇಶ. ಶರಣರಾದವರು ಲೌಕಿಕ ವಿಷಯಗಳನ್ನು ನಿಗ್ರಹಿಸಿಕೊಂಡು, ಅಂತರಂಗ-ಬಹಿರಂಗ ಶುದ್ಧೀಕರಣ, ಇದ್ದಾಗ ಮಾತ್ರ ಶರಣನಾಗುತ್ತಾನೆ. ಅತನಿಂದ ಮಾತ್ರ ಈ ಲೋಕಕ್ಕೆ ಪರೋಪಕಾರಿ ಕಾರ್ಯಗಳು ಜರುಗುತ್ತವೆ.ಎಂಬ ಕಟುಸತ್ಯವನ್ನು "ಸತ್ಯಸಾಕ್ಷಿ" ಕೃತಿಗಳಲ್ಲಿ ಲೇಖಕರು ಅರ್ಥಪೂರ್ಣವಾಗಿ ಹಿಡಿದಿಟ್ಟಿದ್ದಾರೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books