ವಚನಾರ್ಥ ಚಿಂತನ

Author : ಸಿದ್ಧರಾಮ ಸ್ವಾಮಿಗಳು

Pages 406

₹ 250.00




Year of Publication: 2018
Published by: ವಚನ ಅಧ್ಯಯನ ಕೇಂದ್ರ
Address: ನಾಗನೂರು ಶ್ರೀ ರುದ್ರಾಕ್ಷಿ ಮಠ ಶಿವಬಸವನಗರ, ಬೆಳಗಾವಿ

Synopsys

‘ವಚನಾರ್ಥ ಚಿಂತನ’ ಕೃತಿಯು ಸಿದ್ಧರಾಮ ಸ್ವಾಮಿಗಳ ವಚನಗಳ ಕುರಿತ ಚಿಂತನಾ ಬರಹವಾಗಿದೆ. ಈ ಕೃತಿಗೆ ಒಳ್ನುಡಿ ಬರೆದಿರುವ ಸಿದ್ದೇಶ್ವರ ಸ್ವಾಮಿ ಅವರು, `ಶರಣರು, ಅವರ ಹಿರಿಮ ಗರಿಮೆಗಳನು ಅವರನರಿತವರ ಮಾತುಗಳಲ್ಲಿಯೇ ಕೇಳಬೇಕು. ಅವರು ನಿಜವನರಿದ ನಿಶ್ಚಿಂತರು; ಮರಣವ ಗೆಲಿದ ಮಹಂತರು; ಘನವ ಕಂಡ ಮಹಿಮರು, ಅವರು ಲೋಕವಿಡಿದೂ ಲೋಕ ಹಿಂಗಿದರು; ಹೊರಗೆ ಬಳಸಿಯೂ ಒಳಗೆ ಮರೆದರು, ಬಯಲು ಬಿತ್ತಿ, ಬಯಲ ಬೆಳೆದು, ಬಯಲನುಂಡು ಬಯಲಾದ ಬಯಲಯೋಗಿಗಳು; ಆನಂದ-ಕೃಷಿಕರು! ಅವರ ಬದುಕು ಬೆಳದಿಂಗಳು, ಕಿಚ್ಚಿಲ್ಲ: ಸಂಕಲ್ಪ-ವಿಕಲ್ಪಗಳ ಭ್ರಮೆಯಿಲ್ಲ. ಶಾಂತ, ಶೀತಲ! ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತೆ ಬಾಳಿದರು. ಅವರಲ್ಲಿ ಮರಹು-ಮಾಯೆಗಳಿಗೆಡೆಯಿಲ್ಲ; ಅಹಂ-ಅಭಿಮಾನಗಳಿಗೆ ಇಂಬಿಲ್ಲ. ಅವರ ಮಾತುಗಳೂ ಹಾಗೆಯೇ. ಅವು ಮಧುರ, ಜೇನು ಸಕ್ಕರೆ ಬೆರೆಸಿದ ಹಾಲಿನಂತೆ! ಒಮ್ಮೊಮ್ಮೆ ಆದರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ, ಅವು ಮನದ ಕತ್ತಲೆ ಕಳೆವ ಜ್ಯೋತಿಗಳು! ಅವುಗಳಲ್ಲಿ ಏನಿಲ್ಲ? ಹದವಾದ ಬದುಕಿಗೆ ಅವಶ್ಯವಾದುದೆಲ್ಲ ಇದೆ. ಅವು 'ಸೂಳ್ನುಡಿ'ಗಳು. ಅರಳಿದ ಅಲರುಗಳು, ಹೊರಗೆ ಕಾವ್ಯದ ಸೊಬಗು, ಒಳಗೆ ಅನುಭವದ ಮಕರಂದ; ಅನುಭಾವದ ಅಮೃತ ಅವುಗಳಲ್ಲಿಯ ಆ ಅಮೃತವನ್ನು ಆಸ್ವಾದಿಸಿ, ಅದರ ಸವಿಯನ್ನು ಯುಕ್ತ ಶಬ್ದಗಳಲ್ಲಿಟ್ಟು ಸುಖಿಸಿದವರು ಪೂಜ್ಯರಾದ ಶ್ರೀ ಸಿದ್ಧರಾಮ ಸ್ವಾಮೀಜಿಯವರು. ಅವರು ರೇಖಿಸಿದ ವ್ಯಾಖ್ಯಾನಗಳೆಲ್ಲ ಅನುಭವದ ಅಭಿವ್ಯಕ್ತಿಗಳು, ವಚನಗಳ ಅಂತಃಸತ್ವವನ್ನು ಬಿಚ್ಚಿ ಬಿಚ್ಚಿಡುವ ಅವರ ಕಲೆ ಕಮನೀಯ, ಅಲ್ಲಲ್ಲಿ ಉಚಿತ ಉದಾಹರಣೆಗಳು; ಆಧುನಿಕ ಮನವೊಪ್ಪುವವೋಲ್ ವಿವರಣೆಗಳು: ಹೃದ್ಯ ಬೋಧನೆಗಳು’ ಎಂದಿದ್ದಾರೆ.

About the Author

ಸಿದ್ಧರಾಮ ಸ್ವಾಮಿಗಳು
(12 December 1958)

ಪ್ರಸ್ತುತ ಯಡಿಯೂರು ಗದಗ ಡಂಬಳ್ ಮಠದ ಪೀಠಾಧಿಪತಿಯಾಗಿರುವ ಜಗದ್ಗುರು ಶ್ರೀ ಸಿದ್ಧರಾಮ ಸ್ವಾಮೀಜಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಡಿಸೆಂಬರ್ 12, 1958ರಲ್ಲಿ ಜಂಗಮ ಸಮಾಜದ ತಂದೆ ರುದ್ರಯ್ಯ, ತಾಯಿ ಶಾಂತಮ್ಮಳ ಉದರದಲ್ಲಿ ಜನಿಸಿದ ಬಾಲಕ ಗುರುಪಾದಯ್ಯ. ಮುಂದೆ ಬಿಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡರು. ಅದಾದ ಬಳಿಕ ಬನಾರಸ್ ವಿವಿಯಲ್ಲಿ ಎಂಎ ಹಿಂದಿ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಉನ್ನತ ವ್ಯಾಸಂಗ ಪಡೆದುಕೊಂಡರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ 1994ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡರು. ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳ ಉತ್ತರಾಧಿಕಾರಿಯಾಗಿ ಇಡೀ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಹಿಂದಿನ ಮಠಾಧೀಶರ ...

READ MORE

Related Books