ಶರಣಾಲೋಕ

Author : ಬಾಲಚಂದ್ರ ಜಯಶೆಟ್ಟಿ

Pages 132

₹ 80.00




Year of Publication: 2015
Published by: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು
Address: ಮೈಸೂರು

Synopsys

ಶರಣ ಯುಗದ ಮೂರೂವರೆ ಶತಮಾನಗಳ ನಂತರ ಸಿಖ್ ಧರ್ಮ ಹುಟ್ಟಿಕೊಂಡಿದ್ದರೂ ಆ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಇದೆ. ಆದರೆ, ಅದಕ್ಕಿಂತಲೂ ಪೂರ್ವದಲ್ಲಿ ಹುಟ್ಟಿ ಸಾಮಾಜಿಕ ಚಳವಳಿ ಮೂಲಕ ಸುಧಾರಣೆಗೆ ಯತ್ನಿಸಿದ ಶರಣರ ಲಿಂಗಾಯತ ಧರ್ಮಕ್ಕೆ ಇನ್ನೂ ಸ್ವತಂತ್ರತೆಯ ಮಾನ್ಯತೆ ಇಲ್ಲ. ಶರಣರ ವಿಚಾರಗಳನ್ನು ಸ್ಥಾಪಿತ ಧರ್ಮ-ಸಿದ್ಧಾಂತಗಳೊಂದಿಗೆ ತೌಲನಿಕ ಅಧ್ಯಯನಗಳು ಇಲ್ಲಿಯ ಲೇಖನಗಳಾಗಿವೆ. ಶರಣರ ಆಚಾರ -ವಿಚಾರಗಳು ಯಾವುದೇ ಸ್ಥಾಪಿತ ಧರ್ಮಕ್ಕಿಂತಲೂ ಕಡಿಮೆ ಏನಿಲ್ಲ ಎಂಬ ಪ್ರತಿಪಾದನೆಯನ್ನು ಪ್ರತಿ ಲೇಖನಗಳಲ್ಲೂ ವ್ಯಕ್ತವಾಗಿದೆ.

 

About the Author

ಬಾಲಚಂದ್ರ ಜಯಶೆಟ್ಟಿ
(22 November 1939)

ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ  ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.  ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...

READ MORE

Related Books